ಬೆಳಗಾವಿ: ವಿಕಲಚೇತನರ ವಿವಿಧೂದ್ದೇಶ ದ. ಕ ಜಿಲ್ಲಾ ಒಕ್ಕೂಟದಿಂದ ಡಿ.7 ರಂದು ಬೆಳಗಾವಿ ಅಧಿವೇಶನದಲ್ಲಿ ಬೃಹತ್ ಪ್ರತಿಭಟನೆ ಹಾಗೂ ಹಕ್ಕೋತ್ತಾಯಕ್ಕೆ ನಿರ್ಧಾರ ಮಾಡಲಾಗಿದೆ ಎಂದು ಒಕ್ಕೂಟದ ಜಿಲ್ಲಾಧ್ಯಕ್ಷ ಜೋನ್ ಬ್ಯಾಪಿಸ್ಟ್ ಡಿ ಸೋಜಾ ಹೇಳಿದ್ದಾರೆ.
ವಿಕಲಚೇತನರಿಗೆ ಸರಕಾರದ ಹಲವು ಯೋಜನೆ ಸಹಿತ ವೇತನ, ಪ್ರಯಾಣ ಭತ್ಯೆ ಸೇರಿದಂತೆ ಹಲವು ಸವಲತ್ತುಗಳನ್ನ ಒದಗಿಸಲು ಒತ್ತಾಯಿಸಿ ಪ್ರತಿಭಟನೆ ನಡೆಯಲಿದೆ.
ಕಳೆದ 15 ವರ್ಷಗಳಿಂದ ವಿಕಲಚೇತನರ ಬೇಡಿಕೆಗೆ ಯಾವುದೇ ಸ್ಪಂದನೆ ಸಿಗುತ್ತಿಲ್ಲ.ನಮಗೆ ನೀಡುವ ವೇತನ ಜೀವನ ನಿರ್ವಹಣೆಗೆ ಸಾಕಾಗುತ್ತಿಲ್ಲ. ಮತ್ತೊಂದೆಡೆ ನಮ್ಮ ಹುದ್ದೆಗಳನ್ನ ಖಾಯಂ ಮಾಡುತ್ತಿಲ್ಲ.ಖಾಯಂ ಆಗುವರೆಗೂ MRW, VRW, URV ಕಾರ್ಯಕರ್ತರಿಗೆ 18 ಸಾವಿರ ವೇತನ ನೀಡಬೇಕು. ವಿಕಲಚೇತನರಿಗೆ ಪ್ರತ್ಯೇಕ ನಿಗಮ ರಚನೆಯಾಗಬೇಕು ಎಂದು ಆಗ್ರಹಿಸಿದ್ದಾರೆ