ಗದಗ: ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನೆಚ್ಚಿನ ನಟನ ಬ್ಯಾನರ್ ಹಾಕುವಾಗ ಮೂವರು ಯುವಕರು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಯುವಕ ಮುರಳಿ ತಂದೆ-ತಾಯಿ ಪ್ರತಿಕ್ರಿಯೆ ನೀಡಿದ್ದಾರೆ.
ನಟ ಯಶ್ ಅಂದರೆ ನನ್ನ ಮಗನಿಗೆ ಬಹಳ ಇಷ್ಟ. ನನಗೆ ಮೂವರು ಮಕ್ಕಳು ಅದರಲ್ಲಿ ಎರಡು ಹೆಣ್ಣು, ಒಬ್ಬನೇ ಮಗ ಇದ್ದನು. ಆ ಮಗನನ್ನು ಈಗ ಕಳೆದುಕೊಂಡಿದ್ದೇವೆ ಪ್ರತಿ ವರ್ಷ ಯಶ್ ಬರ್ತ್ ಡೇಯನ್ನು ಮಾಡುತ್ತಿದ್ದರು. ಸದ್ಯ ಮಗನೇ ಇಲ್ಲ, ಕೋಟಿ ಕೊಟ್ಟರು ಮಗ ಬರಲ್ಲ. ದಿನದ ಕೂಲಿ ಮಾಡಿ ಒಂದು ದಿನಕ್ಕೆ 300- 400 ರೂಪಾಯಿ ತಂದು ಕೊಡುತ್ತಿದ್ದನು. ಅದರಿಂದಲೇ ಜೀವನ ನಡೆಯುತ್ತಿತ್ತು. ಮಗ ದುಡಿದು ತಂದು ನನಗೆ ದುಡ್ಡು ಕೊಡುತ್ತಿದ್ದನು ಎಂದು ಮೃತ ಮುರಳಿ ತಂದೆ ತಾಯಿ ಅಳಲು ತೋಡಿಕೊಂಡಿದ್ದಾರೆ.