ಗದಗ: ಕುಸಿದು ಬಿದ್ದ ಮನೆ ಅವಶೇಷಗಳ ಅಡಿ ಸಿಲುಕಿದ್ದ ಇಬ್ಬರು ಮಕ್ಕಳು ಸೇರಿ ನಾಲ್ವರ ರಕ್ಷಣೆ ಮಾಡಲಾಗಿರುವ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ನಡೆದಿದೆ.
ಸದ್ಯ ಗುರುಶಾಂತಯ್ಯ, ಪತ್ನಿ ಶೈಲಾ, ಮಕ್ಕಳಾದ ಅಜಯ್, ಸೃಷ್ಟಿ ಅವಶೇಷಗಳಡಿ ಸಿಲುಕಿದ್ದುಇವರನೆಲ್ಲಾ ರಕ್ಷಣೆ ಮಾಡಲಾಗಿದೆ.
ಇನ್ನು ಮಳೆಯಿಂದಾಗಿ ಶಿಥಿಲಗೊಂಡಿದ್ದ ಮನೆ ಗೋಡೆ, ಛಾವಣಿ ಕಳೆದ ತಡರಾತ್ರಿ ಏಕಾ ಏಕಿ ಕುಸಿತ ಕಂಡಿದೆ.ಪರಿಣಾಮ ಈ ನಾಲ್ವರು ಅವಶೇಷಗಳು ಅಡಿ ಸಿಲುಕಿದ್ದರು.ಅಲ್ಲದೆ, ಗೋಡೆ ಕುಸಿದಾಗ ಗುರುಶಾಂತಯ್ಯ ಕೂಗಾಟ ಕಿರುಚಾಟ ನಡೆಸಿದ್ದಾರೆ.ತಕ್ಷಣ ನೆರವಿಗೆ ಬಂದ ಗ್ರಾಮಸ್ಥರು ಅವಶೇಷಗಳು ಅಡಿಸಿಲುಕಿದ್ದ ನಾಲ್ವರನ್ನು ರಕ್ಷಿಸಿ, ಗಾಯಗೊಂಡ ಗುರುಶಾಂತಯ್ಯ ನನ್ನು ಲಕ್ಷ್ಮೇಶ್ವರ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ.