ಹುಬ್ಬಳ್ಳಿ: ರಾಜ್ಯ ಸರ್ಕಾರ ಕೇಂದ್ರದ ವಿರುದ್ಧ ಕೋರ್ಟ್ ಗೆ ಹೋದ ವಿಚಾರ, ಜನರು ಸಧ್ಯ ಸಂಕಷ್ಟದಲ್ಲಿದ್ದಾರೆ ಅವರ ಕಷ್ಟವನ್ನು ನಿವಾರಣೆ ಮಾಡೊದು ರಾಜ್ಯ ಸರ್ಕಾರದ ಕರ್ತವ್ಯ. ಇವರು ನೈಜ ಸ್ಥಿತಿ, ಸಮಸ್ಯೆಗಳನ್ನು ಹೇಳಿಕೊಳ್ಳಲಿಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ರಾಜ್ಯ ಸರ್ಕಾರದಿಂದ ಹಣ ತೆಗೆದು ರೈತರಿಗೆ ಪರಿಹಾರ, ಕುಡಿಯುವ ನೀರು, ಮೇವು, ಕೈಗೆ ಕೆಲಸ ಕೊಡಬೇಕು. ಇದನ್ನು ಎಲ್ಲಾ ಸರ್ಕಾರ ಇದ್ದಾಗ ಎಂದಿನಿಂದಲೂ ಮಾಡಿಕೊಂಡು ಬರುತ್ತಿದೆ. ಇವರು ಇದನ್ನೆಲ್ಲ ಬಿಟ್ಟು ಕೇಂದ್ರ ಸರ್ಕಾರದ ಕಡೆ ಬಟ್ಟು ಮಾಡಿ ತೋರಿಸುತ್ತಿದ್ದಾರಂದರು.
ಪ್ರವಾಹ ಬಂದಾಗ ಕೇಂದ್ರ ಸರ್ಕಾರದಕ್ಕಿಂತ ಎರಡು ಪಟ್ಟು ಹಣ ಕೊಟ್ಟು ರೈತರನ್ನು ಉಳಸಿದ್ದೇವೆ. ಇವರು ಏನ ಮಾಡ್ತಿದ್ದಾರೆ. ರೈತ ವಿರೋಧಿ ಕೆಲಸ ಮಾಡ್ತಿದ್ದಾರೆ. ರೈತರಿಲ್ಲದೆ ಸರ್ಕಾರ ನಡೆಸುತ್ತಿದ್ದಾರೆ ಎಂದರು.