ಅಣ್ಣಿಗೇರಿ: ಸಾರಿಗೆ ಬಸ್ ಕಲ್ಪಿಸುವಂತೆ ಆಗ್ರಹಿಸಿ ಅಣ್ಣಿಗೇರಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹವನ್ನು ಸಾಮಾಜಿಕ ಕಾರ್ಯಕರ್ತ ಈರಪ್ಪ ಗುರಿಕಾರ ನೇತೃತ್ವದಲ್ಲಿ ಪ್ರಾರಂಭಗೊಳಿಸಲಾಗಿತ್ತು.
ಈ ವೇಳೆ ಮಾತನಾಡಿದ ಅವರು ಇನ್ನೂ ಹೋರಾಟ ನಡೆಯಲಿದೆ ನಮ್ಮ ಹೋರಾಟಕ್ಕೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಡೆಯಲಿದೆ ಎಂದು ಹೇಳಿದರು. ಬಳಿಕ ಮಳೆಯಲ್ಲಿಯೂ ಹೋರಾಟ ನಡೆದು ಕೊನೆಗೆ ಪೋಲಿಸ್ ಅಧಿಕಾರಿಗಳು ಸಾರಿಗೆ ಹಿರಿಯ ಅಧಿಕಾರಿಗಳ ಜೊತೆಗೆ ದೂರವಾಣಿ ಸಂಪರ್ಕ ಮಾಡಿ ಇಲಾಖೆಯ ಭರವಸೆಯ ಮೂಲಕ ಉಪವಾಸ ಅಂತ್ಯಗೊಳಿಸಲಾಯಿತು.