ಹುಬ್ಬಳ್ಳಿ: ಆನ್ ಲೈನ್ ಗೇಮ್ ನಲ್ಲಿ ಒಂದು ಕೋಟಿ ರೂ.ಗಳಿಗೂ ಹೆಚ್ಚು ಹಣ ಗೆದ್ದಿದ್ದ ಸ್ನೇಹಿತನನ್ನು ಅಪಹರಿಸಿದ ಆರೋಪದ ಮೇಲೆ ಏಳು ಯುವಕರನ್ನು ಬಂಧಿಸಲಾಗಿದೆ.
ಅಪಹರಣಕ್ಕೊಳಗಾದ ಗರೀಬ್ ನವಾಜ್ ಎಂಬ ಯುವಕನನ್ನು ಪೊಲೀಸರು ರಕ್ಷಿಸಿದ್ದಾರೆ.
ಆನ್ ಲೈನ್ ಗೇಮ್ ನಲ್ಲಿ ನವಾಜ್ ದೊಡ್ಡ ಮೊತ್ತದ ಬಹುಮಾನವನ್ನು ಗೆದ್ದಿದ್ದಾನೆ ಎಂದು ತಿಳಿದ ನಂತರ, ಅವನ ಸ್ನೇಹಿತರಾದ ಮೊಹಮ್ಮದ್ ಆರಿಫ್, ಇಮ್ರಾನ್, ಅಬ್ದುಲ್ ಕರೀಮ್, ಹುಸೇನ್ ಸಾಬ್, ಇಮ್ರಾನ್ ಎಂ, ತೌಫಿಫ್ ಮತ್ತು ಮೊಹಮ್ಮದ್ ರಜಾಕ್ ಅವನನ್ನು ಅಪಹರಿಸಲು ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಅಪಹರಣಕಾರರು ಅವನ ತಂದೆಗೆ ಕರೆ ಮಾಡಿ ಗರೀಬ್ ನವಾಜ್ ನನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಲು ೧ ಕೋಟಿ ರೂ.ಗಳನ್ನು ಒತ್ತೆಹಣವಾಗಿ ಕೇಳಿದರು. ನವಾಜ್ ಅವರ ತಂದೆ ನಿರಾಕರಿಸಿದಾಗ, ಅವರು 15 ಲಕ್ಷ ರೂ.ಗಳಿಗೆ ಇಳಿಸಿದ್ದರು
ಹಣ ಪಾವತಿಸಲು ವಿಫಲವಾದರೆ ತನ್ನ ಮಗನನ್ನು ಕೊಲ್ಲುವುದಾಗಿ ಆರೋಪಿ ಬೆದರಿಕೆ ಹಾಕಿದ್ದಾನೆ. ಮಾಹಿತಿ ಪಡೆದ ನಂತರ, ಪೊಲೀಸ್ ಇಲಾಖೆ ನಾಲ್ಕು ವಿಶೇಷ ತಂಡಗಳನ್ನು ರಚಿಸಿ ತನಿಖೆಯನ್ನು ಪ್ರಾರಂಭಿಸಿತು.
ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಲಾಭುರಾಮ್ ಅವರು ತನಿಖೆಯ ಮೇಲ್ವಿಚಾರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.