ಧಾರವಾಡ: ನವಲಗುಂದ ತಾಲ್ಲೂಕಿನ ಗುಡಿಸಾಗರ ಗ್ರಾಮದಲ್ಲಿ ಏ. 5 ರಂದು ನೂತನ ಜೈನ ಬಸದಿ ದೇವಸ್ಥಾನ ಉದ್ಘಾಟನೆ ಮತ್ತು ಪಂಚಕಲ್ಯಾಣ ಮಹೋತ್ಸವ ಅಂಗವಾಗಿ ಗುಡಿಸಾಗರ ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯೆ ಶ್ರೀ 108 ಪುಣ್ಯಸಾಗರ ಮುನಿಮಹಾರಾಜರು ತಮ್ಮ ನೂರಾರು ಶಿಷ್ಯರೊಂದಿಗೆ ಪಾದಯಾತ್ರೆ ಮೂಲಕ ನವಲಗುಂದಕ್ಕೆ ಆಗಮಿಸಿದ ವೇಳೆ ಸಮಾಜ ಮುಖಂಡರು ಪಾದ ಪೂಜೆ ಮೂಲಕ ಬರಮಾಡಿಕೊಂಡರು.
ಈ ವೇಳೆ ವಿಜಯಗೌಡ ಪಾಟೀಲ, ಬಸನಗೌಡ ಪಾಟೀಲ, ಪ್ರಕಾಶ ಪಾಟೀಲ, ಮನೋಹರ ಪಾಟೀಲ, ಸಂತೋಷ ಪಾಟೀಲ, ಗಿರೀಶ್ ಪಾಟೀಲ, ಪವನ ಪಾಟೀಲ, ಆನಂದ ಜಕ್ಕನಗೌಡ್ರ, ಪ್ರಭಾವತಿ ಪಾಟೀಲ, ವಿಮಲಾ ಪಾಟೀಲ, ಇತರರು ಇದ್ದರು.