ಹುಬ್ಬಳ್ಳಿ: ಮಾನವ ಕುಲಕ್ಕೆ ಭೇದವಿಲ್ಲ ಎಲ್ಲಾ ಜಾತಿ ಧರ್ಮ ಒಂದೇ ಎನ್ನುವುದಕ್ಕೆ ಇದೀಗ ಸಾಕ್ಷಿಯಾಗಿದೆ. ಇಲ್ಲಿಯ ನವನಗರದ ಪಂಚಾಕ್ಷರಿ ನಗರದಲ್ಲಿ ಹಿಂದೂ ಗಣಪತಿಗೆ ಮುಸ್ಲಿಂ ಸಮುದಾಯದವರಿಂದ ಹಿಂದೂ ಮಹಾಗಣಪತಿಗೆ ಪೂಜೆ ಸಲ್ಲಿಸಲಾಯಿತು.
ಮುಸ್ಲಿಂ ಮಹಿಳೆಯರು ಗಣೇಶನಿಗೆ ಆರತಿ ಎತ್ತುವ ಮೂಲಕ ಪೂಜೆಯನ್ನು ಮಾಡಿದರು. ಜಾತಿ ಧರ್ಮ ಎಂದು ವಿಷ ಬೀಜ ಬಿತ್ತುವವರಿಗೆ ಸೌಹಾರ್ದತೆಯನ್ನು ಸಾರುವ ಗಣೇಶ ಈ ಹಿಂದೂ ಮಹಾ ಗಣಪತಿ ಅಲಿಸಾಬ್ ನದಾಫ್ ಎಂಬುವ ಕುಟುಂಬದವರು ಪೂಜೆಯನ್ನು ಸಲ್ಲಿಸಿ ಹಿಂದೂ ಮುಸ್ಲಿಮರು ಒಂದೇ ಎನ್ನುವಂತಹ ಸಂದೇಶವನ್ನು ಸಾರಿ ಮೆರೆದರು.