News Karnataka Kannada
Friday, May 03 2024
ಹುಬ್ಬಳ್ಳಿ-ಧಾರವಾಡ

ಬಿಸಿಲಿನ ದಾಹ : ಆಟೋ ಚಾಲಕನ ಕಾರ್ಯಕ್ಕೆ ಶಹಬ್ಬಾಷ್ ಎಂದ ಸಚಿವ ಪ್ರಹ್ಲಾದ ಜೋಶಿ

ಸೂರ್ಯನ ಆರ್ಭಟಕ್ಕೆ ಜನರು ಬೆಂದು ಹೋಗುತ್ತಿದ್ದಾರೆ. ಬಿಸಿಲಿನ ತಾಪಕ್ಕೆ ಜನರು ಬಾಯಿ ಬಿಡುತ್ತಿದ್ದಾರೆ. ಈ ವೇಳೆ ನಾಗರಾಜ ಗಬ್ಬೂರ ಎಂಬ ಆಟೋ ಚಾಲಕನೊಬ್ಬ ಪ್ರಯಾಣಿಕರ ದಾಹ ತೀರಿಸಲು ಒಂದು ಮಹತ್ತರ ಕಾರ್ಯವನ್ನು ಮಾಡಿದ್ದಾರೆ.
Photo Credit : NewsKarnataka

ಹುಬ್ಬಳ್ಳಿ: ಸೂರ್ಯನ ಆರ್ಭಟಕ್ಕೆ ಜನರು ಬೆಂದು ಹೋಗುತ್ತಿದ್ದಾರೆ. ಬಿಸಿಲಿನ ತಾಪಕ್ಕೆ ಜನರು ಬಾಯಿ ಬಿಡುತ್ತಿದ್ದಾರೆ. ಈ ವೇಳೆ ನಾಗರಾಜ ಗಬ್ಬೂರ ಎಂಬ ಆಟೋ ಚಾಲಕನೊಬ್ಬ ಪ್ರಯಾಣಿಕರ ದಾಹ ತೀರಿಸಲು ಒಂದು ಮಹತ್ತರ ಕಾರ್ಯವನ್ನು ಮಾಡಿದ್ದಾರೆ.

ಆಟೋಗಳಲ್ಲಿ ನೀರಿನ ಕ್ಯಾನ್‌ಗಳನ್ನು ಅಳವಡಿಸಿ ಪ್ರಯಾಣಿಕರ ದಾಹ ತೀರಿಸುತ್ತಿರುವ  ಆಟೋ ಚಾಲಕ ನಾಗರಾಜ ಗಬ್ಬೂರ. ಈತ ಸುಮಾರು ನಾಲ್ಕೈದು ವರ್ಷಗಳಿಂದ ತನ್ನ ಆಟೋದಲ್ಲಿ ಮಾತ್ರ ನೀರಿನ ಕ್ಯಾನ್ ಇಟ್ಟುಕೊಂಡು ಚಲಿಸುತ್ತಿದ್ದರು.

ಆದ್ರೆ ಈ ವರ್ಷ ಬಿಸಿಲಿನ ತಾಪ ಹೆಚ್ಚಾಗಿದ್ದರಿಂದ ತನ್ನ ಸ್ವಂತ ಹಣದಲ್ಲೆ ಆಟೋ ಚಾಲಕ ನಾಗರಾಜ ಅವರು, ಸುಮಾರು 14 ಆಟೋಗಳಿಗೆ ನೀರಿನ ಕ್ಯಾನ್‌‌ಗಳನ್ನು ಅಳವಡಿಸುವ ಮೂಲಕ ಒಂದು ಒಳ್ಳೆಯ ಕಾರ್ಯವನ್ನು ಮಾಡಿದ್ದಾರೆ. ಈಗಾಗಲೇ ಪ್ರಯಾಣಿಕರು, ಸಾರ್ವಜನಿಕರು ಆಟೋದಲ್ಲಿ ಬಂದು ನೀರು ಕುಡಿಯುವ ಮೂಲಕ ದಾಹ ತಿರಿಸಿಕೊಂಡು ಆತನ ಕಾರ್ಯಕ್ಕೆ ಧನ್ಯವಾದ ತಿಳಿಸುತ್ತಿದ್ದಾರೆ.

ಒಟ್ಟಾರೆ ಹೇಳುವುದಾದರೆ ಆಟೋ ಚಾಲಕರೆಂದ್ರೆ ಜಾಸ್ತಿ ದುಡ್ಡು ತಗೋತಾರೆ ಅನ್ನೋರಿಗೆ. ಅದೇ ಆಟೋ ಚಾಲಕರು ಬಿಸಿಲಿನ ತಾಪಕ್ಕೆ ಜನರು ದಾಹ ತೀರಿಸಿಕೊಳ್ಳಲು ನೀರಿನ ವ್ಯವಸ್ಥೆ ಮಾಡಿದ್ದು ಒಳ್ಳೆಯ ಸಂಗತಿ. ನಾಗರಾಜ ಅವರ ಕಾರ್ಯಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮತ್ತು ಹುಬ್ಬಳ್ಳಿ ಜನ ಶಹಬ್ಬಾಷ್ ಎಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು