ಧಾರವಾಡ: ರಾಜ್ಯ ಸರ್ಕಾರದ ಘೋಷಿಸಿದ ಗ್ಯಾರಂಟಿಯಲ್ಲಿ ಒಂದಾದ “ಶಕ್ತಿ” ಯೊಜನೆಗೆ ಧಾರವಾಡ ಕೇಂದ್ರಿಯ ಹೊಸ ಬಸ್ ನಿಲ್ದಾಣದಲ್ಲಿ ಚಾಲನೆ ದೊರೆಯಲಿದ್ದು ಎಲ್ಲ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಕಾರ್ಯಕ್ರಮಕ್ಕೂ ಮೊದಲು ಸಾರಿಗೆ ಸಂಸ್ಥೆ ಸಿಬ್ಬಂದಿಯಿಂದ ಹಾಡುಗಾರಿಕೆ ಕಾರ್ಯಕ್ರಮ ನಡೆಯಿತ್ತು.
ಧಾರವಾಡ ಹೊಸ ಬಸ್ ನಿಲ್ದಾಣದಲ್ಲಿ ಅಧಿಕಾರಿ, ಕಂಡಕ್ಟರ್ ಹಾಗೂ ಇತರೆ ಸಿಬ್ಬಂದಿಗಳಿಂದ ಇಂಪಾದ ಹಾಡುಗಳ ಸುರಿಮಳೆ ಸುರಿಯಿತ್ತು. ಮಹಿಳಾ ಕಂಡಕ್ಟರ್ ನಾಗವೇಣಿ, ಸಹಾಯಕ ಸಂಚಾರಾಧಿಕಾರಿ ಎಂ.ಸಿ. ದಾಸನಕೊಪ್ಪರಿಂದ ಈ ಕಾರ್ಯಕ್ರಮ ನಡೆಯಿತ್ತು. ಹಾಡುಗಾರಿಕೆಗೆ ಯುವ ಗಾಯಕಿಯರಾದ ಪ್ರೇಮಾ ಮತ್ತು ಲಹರಿ ಸಾಥ್ ನೀಡಿದರು.