ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮೊದಲು ಪೆನ್ ಡ್ರೈವ್ ನಲ್ಲಿ ಏನಿದೆ ಅದನ್ನು ಬಿಡುಗಡೆ ಮಾಡಲಿ ನಂತರ ಯಾವ ಕ್ರಮ ಕೈಗೊಳ್ಳಬೇಕು ನೋಡೋಣ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಈಗಾಗಲೇ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸಾಕಷ್ಟು ಸಲ ಹೇಳಿದ್ದರು ಆದರೆ ಪೆನ್ ಡ್ರೈವ್ ನಲ್ಲಿ ಯಾವ ಸಚಿವರ ಕುರಿತು ಏನಿದೆ ಗೊತ್ತಿಲ್ಲ ಆದ್ದರಿಂದ ಮೊದಲು ಕುಮಾರಸ್ವಾಮಿ ಅವರು ಪೆನ್ ಡ್ರೈವ್ ನಲ್ಲಿ ಏನಿದೆ ಅಂತಾ ಬಿಡುಗಡೆ ಮಾಡಲಿ ಎಂದರು.
ಇನ್ನೂ ಸಹ ಶಾಸಕರ ಅಸಮಾಧಾನ ಮುಂದುವರಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯಾ ನವರು ಇಂದು ಕೂಡಾ ಅಸಮಾಧಾನಗೊಂಡ ಶಾಸಕರ ಜೊತೆಗೆ ಸಭೆ ನಡೆಸುವ ಕುರಿತು ಮಾತನಾಡಿದ್ದು ಹೌದು ಈಗಾಗಲೇ ಅಸಮಾಧಾನ ವ್ಯಕ್ತಪಡಿಸಿದ್ದ ಶಾಸಕರ ಜೊತೆಗೆ ಸಾಕಷ್ಟು ಸಲ ಮಾತುಕತೆ ನಡೆದಿದ್ದು ಇಂದು ಕೂಡಾ ಕೆಲ ಜಿಲ್ಲೆಗಳ ಅಸಮಾಧಾನಗೊಂಡ ಶಾಸಕರ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯಾ ಅವರು ಸಭೆ ನಡೆಸಿ ಅಸಮಾಧಾನಗೊಂಡ ಶಾಸಕರ ಸಮಸ್ಯೆಗಳನ್ನ ಆಲಿಸಲಾಗುವುದು ಎಂದರು.
ಇನ್ಜು ರಾಜ್ಯಸರ್ಕಾರ ಪತನದ ಬಗ್ಗೆ ಭಾರತೀಯ ಜನತಾ ಪಕ್ಷದವರು ಮೇಲಿಂದ ಮೇಲೆ ಮಾತನಾಡತಾ ಇದ್ದಾರೆ ಯಾವುದೇ ಆಧಾರ ಇಲ್ಲ ಆದ್ದರಿಂದ ನಮಗೆ ಜನ ಐದು ವರ್ಷ ಆಡಳಿತ ಮಾಡಲು ಆಶೀರ್ವಾದ ಮಾಡಿದ್ದಾರೆ. ಸಂಪೂರ್ಣ ಐದು ವರ್ಷ ಸರ್ಕಾರ ನಡೆಯುತ್ತದೆ ಎಂದ ಅವರು ಯಾವುದೇ ಅಭಿವೃದ್ಧಿ ವಿಷಯಗಳ ಕುರಿತು ಕೇಂದ್ರ ಸರ್ಕಾರ ಮಾತನಾಡಲು ಮುಂದಾಗುತ್ತಿಲ್ಲ. ಬಿಜೆಪಿ ವಿವಾದಗಳನ್ನು ಹುಟ್ಟು ಹಾಕಿ ನಮ್ಮ ಸರ್ಕಾರದ ಅಭಿಪ್ರಾಯ ಕೆಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಇದಕ್ಕೆ ಜನರು ಮುಂದೆ ಅದಕ್ಕೆ ಪಾಠ ಕಲಿಸುತ್ತಾರೆ ಎಂದರು.
ಐದು ಗ್ಯಾರಂಟಿ ಯಶಸ್ವಿಯಾಗಿದ್ದು, ಇದರಿಂದಾಗಿ ಅವರಿಗೆ ನೋವಾಗಿದೆ. ಹೀಗಾಗಿ ಸರ್ಕಾರದ ಹೆಸರು ಕೆಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಇದು ಸರಿಯಲ್ಲ ಎಂದರು. ಮುನೇನಕೊಪ್ಪ ಹಾಗೂ ಚಿಕ್ಕನಗೌಡರಲ್ಲಿ ಕಾಂಗ್ರೆಸ್ ಬರುತ್ತಾರೆ ಎಂಬ ಕುರಿತು ಕೇಳಿದ ಪ್ರಶ್ನೆಗೆ ಅವರು ಬರಬಹುದು, ಆದರೆ ಹೆಚ್ಚಿಗೆ ಗೊತ್ತಿಲ್ಲ ನಾವು ಯಾರನ್ನೂ ಸೆಳೆಯುತ್ತಿಲ್ಲ ಪಕ್ಷದ ಸಿದ್ಧಾಂತ ಒಪ್ಪಿ ಬರುವವರನ್ನು ಸ್ವಾಗತ ಮಾಡುತ್ತೇವೆ ಎಂದರು.