ಧಾರವಾಡ: ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಬಿಟ್ಟ ವಿಚಾರವಾಗಿ ಇಂದು ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ. ಈ ಬಂದ್ಗೆ ಧಾರವಾಡದಲ್ಲೂ ವಿವಿಧ ಸಂಘಟನೆಗಳಿಂದ ಬೆಂಬಲ ವ್ಯಕ್ತವಾಗಿದೆ.
ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಸುಧೀರ್ ಮುಧೋಳ ನೇತೃತ್ವದಲ್ಲಿ ಅವರ ಇತರ ಕಾರ್ಯಕರ್ತರು ಧಾರವಾಡದ ಆಲೂರು ವೆಂಕಟರಾವ್ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ವೇಳೆ ಸುಧೀರ್ ಮುಧೋಳ ಅವರು ತಮ್ಮ ರಕ್ತದಿಂದ ಕಾವೇರಿ ನಮ್ಮದು ಎಂಬ ಘೋಷವಾಕ್ಯ ಬರೆದು ಗಮನಸೆಳೆದಿದ್ದಾರೆ. ರಕ್ತ ಕೊಡುತ್ತೇವೆ ಕಾವೇರಿ ನದಿ ನೀರು ಬಿಡುವುದಿಲ್ಲ ಎಂಬ ಘೋಷಣೆಗಳನ್ನು ಕೂಗಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.