ಧಾರವಾಡ: ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ವಿರುಪಾಕ್ಷೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದ ಜಂಗಿ ನಿಕಾಲಿ ಕುಸ್ತಿ ಪಂದ್ಯಾವಳಿಗೆ ತೆರೆ ಬಿದ್ದಿತು.
ಮೂರನೇ ದಿನವಾದ ಕಾರವಾರ, ಧಾರವಾಡ, ಬೆಳಗಾವಿ, ಕಲಬುರ್ಗಿ ಸೇರಿದಂತೆ ಅನೇಕ ಜಿಲ್ಲೆಗಳಿಂದ ಸುಮಾರು 40 ಜೋಡಿ ಕುಸ್ತಿ ಪೈಲ್ವಾನರು ಈ ಕುಸ್ತಿ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು.
ಕೊನೆಯ ದಿನದ ಪಂದ್ಯಾವಳಿಯಲ್ಲಿ ನರೇಂದ್ರದ ಚನ್ನಪ್ಪ, ಕಲಬುರ್ಗಿಯ ಕಿರಣ್, ಯಾದವಾಡದ ವೀರೇಶ, ದೊಡವಾಡದ ಮಹಾಂತೇಶ, ಪುಡಕಲಕಟ್ಟಿಯ ಸಿದ್ದಾರೂಢ, ನವೀನ್ ಕಮ್ಮಾರ, ಜೋಡಳ್ಳಿ ಉಮೇಶ ಪಾಟೀಲ, ಧಾರವಾಡದ ಪ್ರಥಮ, ಆಕಾಶ ಕರಡಿಕೊಪ್ಪ, ಧಾರವಾಡದ ಅಭಿ, ಕಲ್ಲೂರಿನ ನಿಂಗಪ್ಪ ಹಾಗೂ ನಿಂಗಪ್ಪ ಏಳಲ್ಲಿ ಎಂಬ ಪೈಲ್ವಾನರು ವಿಜಯಶಾಲಿಗಳಾದರು. ಇವರಿಗೆ ದೇವಸ್ಥಾನ ಟ್ರಸ್ಟ್ ಕಮಿಟಿ ವತಿಯಿಂದ ಪ್ರೋತ್ಸಹ ಧನ ನೀಡಲಾಯಿತು.