ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ಡಾ.ಮಯೂರ್ ಮೋರೆ ಅವರು ನಡೆಸುತ್ತಿರುವ ‘ನಮ್ಮ ನಡೆ ಅಭಿವೃದ್ಧಿ ಕಡೆ” ಪಾದಯಾತ್ರೆ ಹತ್ತನೇ ದಿನಕ್ಕೆ ಕಾಲಿಟ್ಟಿದೆ.
ಮಹಾನಗರ ಜನತೆಯ ಸಮಸ್ಯೆಗಳನ್ನು ಆಲಿಸುವ ಕೆಲಸವನ್ನು ಡಾ.ಮಯೂರ್ ಮೋರೆ ಮಾಡುತ್ತಿದ್ದಾರೆ.
ಕಳೆದ ಹತ್ತು ದಿನಗಳಿಂದ ಡಾ. ಮಯೂರ್ ಮೋರೆ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆಯು ಇದುವರೆಗೂ 105 ಕಿಲೋ ಮೀಟರ್ಗಳಷ್ಟು ಕ್ರಮಿಸಿದೆ. ಕೆಲಗೇರಿ, ಸಾಧನಕೆರೆ, ಮರಾಠಾ ಕಾಲೊನಿ, ಲಕ್ಷ್ಮೀಸಿಂಗನಕೆರೆ, ಜನ್ನತ್ನಗರ ಸೇರಿದಂತೆ ಹಲವು ಭಾಗಗಳಲ್ಲಿ ಪಾದಯಾತ್ರೆ ಮುಂದುವರೆದಿದೆ.
ಪ್ರತಿ ಕಡೆಗಳಲ್ಲೂ ಅತೀ ದೊಡ್ಡ ಸಮಸ್ಯೆ ಎಂದರೆ ಅದು ಮೂಲಭೂತ ಸಮಸ್ಯೆ, ಈಗಿನ ಆಡಳಿತದಿಂದ ಬಡ ಜನರಿಗೆ ಒದಗಬೇಕಿದ್ದ ಸೌಲಭ್ಯಗಳು ದೊರಕುತ್ತಿಲ್ಲ. ಆ ಸೌಲಭ್ಯಗಳನ್ನು ಒದಗಿಸಿಕೊಡುವತ್ತ ನಮ್ಮ ಪಯಣ ಸಾಗಿದೆ. ಹೋದಲ್ಲೆಲ್ಲ ನಮಗೆ ಒಳ್ಳೆಯ ಸ್ಪಂದನೆ ಸಿಗುತ್ತಿದೆ ಎಂದು ಡಾ.ಮಯೂರ್ ಮೋರೆ ಹೇಳಿದರು. ಮಯೂರ್ ಮೋರೆ ಹೋದ ಕಡೆಗಳಲ್ಲೆಲ್ಲ ಜನರು ತಮ್ಮ ಸಮಸ್ಯೆಗಳನ್ನೇ ಮುಂದಿಟ್ಟು ಅಳಲು ತೋಡಿಕೊಂಡಿದ್ದಾರೆ. ಯುವ ನಾಯಕರು ನಮಗೆ ಬೇಕು ಎಂಬ ಅಭಿಪ್ರಾಯವನ್ನೂ ಹಂಚಿಕೊಂಡಿದ್ದಾರೆ.