News Karnataka Kannada
Saturday, May 04 2024
ಹುಬ್ಬಳ್ಳಿ-ಧಾರವಾಡ

ಧಾರವಾಡ: ಹತ್ತನೇ ದಿನಕ್ಕೆ ಕಾಲಿಟ್ಟಿ ‘ನಮ್ಮ ನಡೆ ಅಭಿವೃದ್ಧಿ ಕಡೆ’ ಪಾದಯಾತ್ರೆ

Dharwad
Photo Credit : News Kannada

ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ಡಾ.ಮಯೂರ್ ಮೋರೆ ಅವರು ನಡೆಸುತ್ತಿರುವ ‘ನಮ್ಮ ನಡೆ ಅಭಿವೃದ್ಧಿ ಕಡೆ” ಪಾದಯಾತ್ರೆ ಹತ್ತನೇ ದಿನಕ್ಕೆ ಕಾಲಿಟ್ಟಿದೆ.

ಮಹಾನಗರ ಜನತೆಯ ಸಮಸ್ಯೆಗಳನ್ನು ಆಲಿಸುವ ಕೆಲಸವನ್ನು ಡಾ.ಮಯೂರ್ ಮೋರೆ ಮಾಡುತ್ತಿದ್ದಾರೆ.
ಕಳೆದ ಹತ್ತು ದಿನಗಳಿಂದ ಡಾ. ಮಯೂರ್ ಮೋರೆ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆಯು ಇದುವರೆಗೂ 105 ಕಿಲೋ ಮೀಟರ್‌ಗಳಷ್ಟು ಕ್ರಮಿಸಿದೆ. ಕೆಲಗೇರಿ, ಸಾಧನಕೆರೆ, ಮರಾಠಾ ಕಾಲೊನಿ, ಲಕ್ಷ್ಮೀಸಿಂಗನಕೆರೆ, ಜನ್ನತ್‌ನಗರ ಸೇರಿದಂತೆ ಹಲವು ಭಾಗಗಳಲ್ಲಿ ಪಾದಯಾತ್ರೆ ಮುಂದುವರೆದಿದೆ.

ಪ್ರತಿ ಕಡೆಗಳಲ್ಲೂ ಅತೀ ದೊಡ್ಡ ಸಮಸ್ಯೆ ಎಂದರೆ ಅದು ಮೂಲಭೂತ ಸಮಸ್ಯೆ, ಈಗಿನ ಆಡಳಿತದಿಂದ ಬಡ ಜನರಿಗೆ ಒದಗಬೇಕಿದ್ದ ಸೌಲಭ್ಯಗಳು ದೊರಕುತ್ತಿಲ್ಲ. ಆ ಸೌಲಭ್ಯಗಳನ್ನು ಒದಗಿಸಿಕೊಡುವತ್ತ ನಮ್ಮ ಪಯಣ ಸಾಗಿದೆ. ಹೋದಲ್ಲೆಲ್ಲ ನಮಗೆ ಒಳ್ಳೆಯ ಸ್ಪಂದನೆ ಸಿಗುತ್ತಿದೆ ಎಂದು ಡಾ.ಮಯೂರ್ ಮೋರೆ ಹೇಳಿದರು. ಮಯೂರ್ ಮೋರೆ ಹೋದ ಕಡೆಗಳಲ್ಲೆಲ್ಲ ಜನರು ತಮ್ಮ ಸಮಸ್ಯೆಗಳನ್ನೇ ಮುಂದಿಟ್ಟು ಅಳಲು ತೋಡಿಕೊಂಡಿದ್ದಾರೆ. ಯುವ ನಾಯಕರು ನಮಗೆ ಬೇಕು ಎಂಬ ಅಭಿಪ್ರಾಯವನ್ನೂ ಹಂಚಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು