ಹುಬ್ಬಳ್ಳಿ : ಸಿದ್ದರಾಮಯ್ಯ ಜಾತಿ ಕಾರಣಕ್ಕೆ ಬದಾಮಿಗೆ ಬಂದ್ರು. ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ 30 ಸಾವಿರ ಮತಗಳ ಅಂತರಿಂದ ಸೋತರು. ಅಲ್ಲಿಂದ ಜಾತಿ ಕಾರಣಕ್ಕೆ ಬಾಗಲಕೋಟೆ ಜಿಲ್ಲೆಯ ಬದಾಮಿಗೆ ಬಂದಿದ್ರು. ಬದಾಮಿಯಲ್ಲಿ ಮತ್ತೆ ಸೋಲ್ತೀನಿ ಅನ್ನೋ ಕಾರಣದಿಂದ ಕೋಲಾರಗೆ ಹೋಗೋ ಪ್ರಯತ್ನ ಮಾಡಿದ್ರು ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕೋಲಾರದಲ್ಲಿ ಸರ್ವೆ ಮಾಡಿಸಿದ ನಂತರ ಅತೀ ಹೆಚ್ಚು ಮತಗಳ ಅಂತದಿಂದ ಸೋಲ್ತಾರೆ ಅನ್ನೋದು ಗೊತ್ತಾಗಿದೆ. ಒಬ್ಬ ಮುಖ್ಯಮಂತ್ರಿ ಆಗಿ ಕೆಲಸದ ಮಾಡಿದವರಿಗೆ ಕ್ಷೇತ್ರ ಇಲ್ಲ ಅಂದ್ರೆ ಹೇಗೆ. ಅಪಾರ ಅನುಭವ ಇರೋ ಸಿದ್ದರಾಮಯ್ಯನವರಿಗೆ ಕ್ಷೇತ್ರ ಇಲ್ಲ. ಅವರು ಮತ್ತೊಬ್ಬರನ್ನು ಗೆಲ್ಲಿಸಿ ಹೇಗೆ ಅಧಿಕಾರಕ್ಕೆ ತರ್ತಾರೆ ಅನ್ನೋದು ಆತ್ಮಾವನ ಮಾಡಿಕೊಳ್ಳಬೇಕು. ಅವರು ಘೋಷಣೆ ಮಾಡಿರೋ ಗ್ಯಾರಂಟಿ ಯಾವದೂ ಆಗಲ್ಲ. ನಮ್ಮ ಸರ್ಕಾರ ಏನ ಹೇಳತ್ತೆ ಅದನ್ನು ಮಾಡತ್ತೆ. ಕಾಂಗ್ರೆಸ್ ಹಾಗಲ್ಲ ಬೇರೆಯವರು ಕೊಟ್ಟಿರೋದಕ್ಕೆ ಲೇಬಲ್ ಹಚ್ತಾರೆ. ಕರ್ನಾಟಕದ ಜನ ಪ್ರಭುದ್ದರಿದ್ದಾರೆ. ನಾವು 140 ಕ್ಜೂ ಹೆಚ್ಚು ಸೀಟ್ ಗೆಲ್ತೀವಿ. ಜನ ಬಿಜೆಪಿಗೆ ಆಶೀರ್ವಾದ ಮಾಡ್ತಾರೆ. ರಾಹುಲ್ ಗಾಂಧಿ ರಾಷ್ಟ್ರೀಯ ನಾಯಕರಾಗಿದ್ದಾರೆ.ನಮ್ಮ ದೇಶದ ಸಮಸ್ಯೆ ಇಲ್ಲಿ ಮಾತಾಡಬೇಕು.ಆದ್ರೆ ರಾಹುಲ್ ಗಾಂಧಿ ಅವರು ಬೇರೆ ದೇಶದಲ್ಲಿ ಮಾತಾಡ್ತಾರೆ ಅಂದ್ರೆ ಅವರ ಬದ್ದತೆ ಏನೂ. ರಾಹುಲ್ ಗಾಂಧಿಗೆ ಮಾತಾಡೋ ನೈತಿಕ ಹಕ್ಕಿಲ್ಲ ಎಂದರು.