ಹುಬ್ಬಳ್ಳಿ: ಕರಸೇವಕನ ಪ್ರಕರಣದಲ್ಲಿ ಪ್ರಹ್ಲಾದ್ ಜೋಶಿ ಕೈವಾಡ ಇದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗಂಭೀರ ಆರೋಪ ಮಾಡಿದ್ದಾರೆ.
ಕರಸೇವಕ ಶ್ರೀಕಾಂತ್ ಪೂಜಾರಿ ಬಂಧನ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಶೆಟ್ಟರ್, 30 ವರ್ಷದ ಹಿಂದಿ ಪ್ರಕರಣವನ್ನು ವಿತ್ ಡ್ರಾ ಮಾಡಿಕೊಂಡು ಪರಿಷ್ಕರಣ ಮಾಡಬೇಕು. ಈ ಹಿಂದೆ ನಾನೂ ಕೂಡ ಪ್ರಯತ್ನಿಸಿದ್ದೇನೆ. ಈಗ ಹೋರಾಟ ಮಾಡುವವರು ಕರಸೇವಕರ ಮೇಲಿನ ಕೇಸ್ ವಾಪಸ್ ಪಡೆಯುವ ಪ್ರಯತ್ನ ಯಾಕೆ ಮಾಡಲಿಲ್ಲ? ಏಳು, ಎಂಟು ವರ್ಷ ಬಿಜೆಪಿ ಅಧಿಕಾರದಲ್ಲಿತ್ತು. ನಾನು ಕೇವಲ 10 ತಿಂಗಳ ಸಿಎಂ ಇದ್ದೆ. ಅಶೋಕ್ ಹೋಮ್ ಮಿನಿಸ್ಟರ್ ಇದ್ದರು, ಯಾಕೆ ವಾಪಸ್ ಪಡೆಯಲಿಲ್ಲ? ಲೋಕಸಭೆ ಚುನಾವಣೆಯಲ್ಲಿ ಗೆಲ್ಲೋಕೆ ಬಿಜೆಪಿ ಪ್ಲಾನ್ ಮಾಡಿದೆ. ಇದರಲ್ಲಿ ಪ್ರಹ್ಲಾದ್ ಜೋಶಿ ಕೈವಾಡ ಇದೆ ಎಂದು ವಾಗ್ದಾಳಿ ನಡೆಸಿದರು.
ಇದೆಲ್ಲ ಬಿಜೆಪಿ ಚುನಾವಣೆ ಗಿಮಿಕ್. ಸರ್ಕಾರದ ನಿರ್ದೇಶನದಲ್ಲಿ ಬಂಧನವಾಗಿಲ್ಲ. ರಾಜಕೀಯ ಮಾಡೋದೇ ನಿಮ್ಮ ಉದ್ದೇಶ. ಮಣಿಕಂಠ ರಾಠೋಡ್ ವಿರುದ್ಧ ಹತ್ತಾರು ಕ್ರಿಮಿನಲ್ ಕೇಸ್ಗಳಿವೆ ಎಂದಿದ್ದಾರೆ.