ಬೇಲೂರು: ಬೇಲೂರು ತಾಲೂಕಿನ ಬಿಕ್ಕೋಡು ಹೋಬಳಿ ಕಬ್ಬಿನಮನೆಯಲ್ಲಿ ಒಂಟಿ ಕಾಡಾನೆಯೊಂದು ನಡೆಸಿದ ದಾಳಿಗೆ ಓರ್ವ ವ್ಯಕ್ತಿ ಬಲಿಯಾದ ರ್ಘಟನೆ ನಡೆದಿದೆ.
ಬಿಕ್ಕೋಡು ಹೋಬಳಿಯ ಬಳಿ ಬೀಡು ಬಿಟ್ಟಿರುವ ಕಾಡಾನೆಯೊಂದು ಸಂಚಾರ ಮಾಡುತ್ತಿದ್ದು, ಕಬ್ಬಿನಮನೆಯಲ್ಲಿ ವಾಸವಿದ್ದ ವಸಂತ ಎಂಬುವವರ ಮೇಲೆ ದಾಳಿ ಮಾಡಿ ಹತ್ಯೆಗೈದಿದೆ.
ಈ ಘಟನೆಯ ಬೆನ್ನಲ್ಲೇ ಇದೀಗ ಅರೇಹಳ್ಳಿ ಹೋಬಳಿಯ ಬಾಳಗುಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಮತ್ತೊಂದು ಒಂಟಿ ಕಾಡಾನೆಯ ಸಂಚಾರ ಕಂಡುಬಂದಿದ್ದು, ಈ ಜಾಗಗಳಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ಹಾಗೂ ಸಂಚರಿಸುವ ವಾಹನ ಸವಾರರು ಜಾಗರೂಕತೆ ವಹಿಸಬೇಕೆಂದು ಬೇಲೂರು ಅರಣ್ಯ ಇಲಾಖೆ ಹಾಗೂ ಎಲಿಫೆಂಟ್ ಟಾಸ್ಕ್ ಫೋರ್ಸ್ ಎಚ್ಚರಿಕೆ ಸಂದೇಶ ರವಾನಿಸಿದೆ.