ಹುಬ್ಬಳ್ಳಿ: ಕ್ರಿಕೆಟ್ ಆಟಗಾರ ಕೆ.ಎಲ್.ರಾಹುಲ್ ಈಗ ಮತ್ತೊಂದು ಮಾನವೀಯ ಕಾರ್ಯಕ್ಕೆ ಮುಂದಾಗಿದ್ದಾರೆ. ಬಡಕುಟುಂಬದ ಬಾಲಕಿಯ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡುವ ಮೂಲಕ ಬಡ ಕುಟುಂಬಕ್ಕೆ ಸಹಾಯ ಮಾಡಿದ್ದಾರೆ.
ಸೃಷ್ಟಿ ಕುಲಾವಿ ಎಂಬುವಂತ ಧಾರವಾಡದ ಸಿದ್ದೇಶ್ವರ ಕಾಲೋನಿಯಲ್ಲಿ ವಾಸವಾಗಿರುವ ಬಡ ಕುಟುಂಬದ ಬಾಲಕಿಗೆ ಭಾರತೀಯ ಕ್ರಿಕೆಟ್ ಆಟಗಾರ ಕೆ.ಎಲ್.ರಾಹುಲ್ ಆರ್ಥಿಕ ನೆರವು ನೀಡಿದ್ದಾರೆ. ಹನುಮಂತಪ್ಪ ಹಾಗೂ ಸುಮಿತ್ರಾ ದಂಪತಿಯ ಮಗಳು ಸೃಷ್ಟಿಗೆ ಭವಿಷ್ಯದಲ್ಲಿ ಡಾಕ್ಟರ್ ಆಗುವ ಕನಸು ಇದೆ. ಆದ್ರೆ ಸುಡಗಾಡು ಸಿದ್ದರ ಜನಾಂಗದಲ್ಲಿ ಹುಟ್ಟಿರುವ ಇವಳಿಗೆ ಬಡತನ ಶಾಪವಾಗಿತ್ತು. ಈ ಶಾಪಕ್ಕೆ ವಿದ್ಯಾಭ್ಯಾಸದಿಂದ ವಂಚಿತವಾಗುವ ಹಾಗೆ ಆಗಿತ್ತು. ಆದರೆ ಸ್ಥಳೀಯರ ಮಾಹಿತಿಯಿಂದ ಕೆ.ಎಲ್.ರಾಹುಲ್ ಅವರು ಆರ್ಥಿಕ ನೆರವು ನೀಡಿದ್ದಾರೆ.
ಇಂತಹ ಕಾರ್ಯವನ್ನು ಎಲ್ಲ ಕ್ರೀಡಾ ಸಾಧಕರು ಮೈಗೂಡಿಸಿಕೊಂಡು ಬಡ ಪ್ರತಿಭೆಗಳಿಗೆ ಆಸರೆಯಾಗಬೇಕಿದೆ.