ಹುಬ್ಬಳ್ಳಿ: ಮೂರು ದಿನ ಯಾವುದೇ ಗೊಂದಲ ಇಲ್ಲದೆ ಗಣೇಶ ಪ್ರತಿಷ್ಠಾಪನೆಯಾಗಿದೆ. ಅಂಜುಮನ್ ಕಮಿಟಿಯವರು ನೀಚರು. ಹಿಂದೂ ಸಮಾಜ ಶಾಂತಿಯಿಂದ ಆಚರಣೆ ಮಾಡಿದೆ. ಈದ್ಗಾ ಮೈದಾನ ಶುದ್ದಿಯಾಗಿದೆ. ಗಣೇಶ ಉತ್ಸವಕ್ಕೆ ವಿರೋಧ ಮಾಡಿದವರು ದೇಶ ವಿರೋಧಿಗಳು, ಅಧರ್ಮಿಯರು ಎಂದು ಪ್ರಮೋದ್ ಮುತಾಲಿಕ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಅದನ್ನು ಮೆಟ್ಟಿ ನಿಂತು ಆಚರಣೆ ಮಾಡಿದ್ದೇವೆ. ಹಿಂದೂ ಸಮಾಜವನ್ನು ಕೆಣಕಿದ್ರೆ. ನಾವು ಮಸೀದಿಯಲ್ಲಿ ಗಣಪತಿ ಕೂರಸುತ್ತೇವೆ. ಮಸೀದಿಯಲ್ಲಿ ಗಣೇಶ ಕೂರಿಸೋ ತಾಕತ್ತು ನಮಗಿದೆ. ನೀವು ಮಾಡೋ ನಮಾಜ್ ವಿರುದ್ದ ನಾವು ಕೋರ್ಟ್ ಗೆ ಹೋಗ್ತೀವಿ. ಗಣಪತಿ ವಿಸರ್ಜನೆ ಶಾಂತಿಯುತವಾಗಿ ಆಗುತ್ತದೆ. ಹಿಂದೂ ಸಮಾಜ ಜಾಗೃತಿ ಆಗಿದೆ. ನಾವು 100 ಕೋಟಿ ಹಿಂದೂಗಳಿದ್ದೇವೆ. ಅಂಜುಮನ್ ಕೋರ್ಟ್ ಗೆ ಹೋಗ್ತೀನಿ ಅನ್ನೋದು ಸರಿ ಅಲ್ಲ. ನಿಮ್ಮ ಸೊಕ್ಕು ಸರಿ ಅಲ್ಲ. ಇದೇನು ಪಾಕಿಸ್ತಾನ ಅಲ್ಲ, ಇದು ನಮ್ಮ ನೆಲ, ಮೈದಾನ ಪಾಲಿಕೆ ಆಸ್ತಿ. ಅಕಸ್ಮಾತ್ ನೀವು ಕೋರ್ಟ್ ಗೆ ಹೋಗ್ತೀನಿ ಅನ್ನೋದ ಆದ್ರೆ ನಾವು ನಮಾಜ್ ಗೆ ಹೋಗ್ತೀವಿ ಎಂದರು.
ಅಂಜುಮನ್ ಸಂಸ್ಥೆಯ ಅಧ್ಯಕ್ಷ ಯೂಸುಫ್ ಸವಣೂರ ಕೇಸ್ ಇನ್ನು ಮುಗಿದಿಲ್ಲ. ನಾವು ಕಾನೂನು ಹೋರಾಟ ಮಾಡ್ತೀವಿ ಎಂದಿದ್ರು. ನಾವು ನಮಾಜ್ ವಿಷಯಕ್ಕೆ ಕೋರ್ಟ್ ಗೆ ಹೋಗಬೇಕಾಗುತ್ತೆ ಎಂದರು.