News Karnataka Kannada
Sunday, May 05 2024
ಹುಬ್ಬಳ್ಳಿ-ಧಾರವಾಡ

ಹಳೇ ದ್ವೇಷದ ಹಿನ್ನೆಲೆ: 23 ಪಾರಿವಾಳಗಳ ಹತ್ಯೆಗೈದ ಕಿಡಿಗೇಡಿಗಳು

23 pigeons killed by miscreants over old enmity
Photo Credit : News Kannada

ಹುಬ್ಬಳ್ಳಿ: ಮನೆಯೊಂದರಲ್ಲಿ ಸಾಕಿದ್ದ ಪಾರಿವಾಳಗಳ ಕುತ್ತಿಗೆ ಕತ್ತರಿಸಿ ಕೊಂದ ಘಟನೆ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಯಾವಗಲ್ ಪ್ಲಾಟ್​ನಲ್ಲಿ ನಡೆದಿದೆ. ಕಿಡಿಗೇಡಿಗಳು 23 ಪಾರಿವಾಳಗಳನ್ನ ಸಾಯಿಸಿದ್ದಾರೆ.

ರಾಹುಲ್ ದಾಂಡೇಲಿ ಅವರಿಗೆ ಸೇರಿದ 23 ಪಾರಿವಾಳಗಳಾಗಿದ್ದು, ಚಾಕು ಬಳಸಿ ಕುತ್ತಿಗೆ ಕಟ್ ಮಾಡಿ ಕೊಂದಿದ್ದಾರೆ. ಬಳಿಕ ಪಾರಿವಾಳಗಳನ್ನು ಅಲ್ಲಲ್ಲೇ ಬೀಸಾಕಿ ಹೋಗಿದ್ದಾರೆ.

ರಾಹುಲ್​ ಕಳೆದ ಆರು ತಿಂಗಳಿಂದ ಪಾರಿವಾಳ ಸಾಕಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಪಾರಿವಾಳ ಸಾಯಿಸಿ ಕಿರಾತಕರು ಪರಾರಿಯಾಗಿದ್ದಾರೆ.

ಹಳೇ ದ್ವೇಷದ ಹಿನ್ನೆಲೆ ಪಾರಿವಾಳ ಕೊಲೆ ಮಾಡಿರೋ ಶಂಕೆ ವ್ಯಕ್ತವಾಗಿದೆ. ಈ ಘಟನೆ ರಾಹುಲ್​ಗೆ ಗೊತ್ತಾಗುತ್ತಿದ್ದಂತೆಯೇ ಹುಬ್ಬಳ್ಳಿಯ ಉಪನಗರ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಪಾರಿವಾಳಗಳನ್ನು ಸಾಯಿಸಿದವರನ್ನ ಕೂಡಲೇ ಅರೆಸ್ಟ್ ಮಾಡಬೇಕೆಂದು ಆಗ್ರಹಿಸಿ ದೂರು ಸಲ್ಲಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು