ಹುಬ್ಬಳ್ಳಿ: ಎಲ್ಲಾ ಸಮಾಜ ಎಲ್ಲಾ ಸುಮುದಾಯದವರು ಜನರು ನನ್ನ ಕೈ ಹಿಡಿದಿದ್ದಾರೆ ಬೆಂಬಲಿಸಿದ್ದಾರೆ. ಆರು ಚುನಾವಣೆಗಿಂದ ಈ ಚುನಾವಣೆಯಲ್ಲಿ ಅತೀ ಹೆಚ್ಚು ಮತಗಳಿಂದ ಆರಿಸಿ ಬರುತ್ತೇನೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಕಾಂಗ್ರೆಸ್ ಗೆ ಸೇರ್ಪಡೆಯಾದ ಮೇಲೆ ಹುಬ್ಬಳ್ಳಿ ಧಾರವಾಡ ಸೆಂಟರ್ ಕ್ಷೇತ್ರ ಕ್ಕೆ ಮಹತ್ವ ಬಂದಿದೆ. ಈಗ ಬಿಜೆಪಿಗೆ ಶೆಟ್ಟರ್ ಮಹತ್ವ ಗೊತ್ತಾಗಿದೆ. ನಾನು ಕಾಂಗ್ರೆಸ್ ಸೇರಿದ ಮೇಲೆ ಬಿಜೆಪಿ ಚಿಂತೆಗಿಡಾಗಿದೆ. ಷಡ್ಯಂತ್ರ, ಕುತಂತ್ರದಿಂದ ಜಗದೀಶ್ ಶೆಟ್ಟರ್ ಸೋಲಿಸಲು ಪ್ರಯತ್ನ ಮಾಡುತ್ತಿದ್ದಾರೆ. ಅದು ಇಡೀ ರಾಜ್ಯ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರ ಗಮನ ಸೆಳೆಯುತ್ತಿದೆ ಎಂದರು.
ಕೆಲವೊಬ್ಬರು ಜಗದೀಶ್ ಶೆಟ್ಟರ್ ಸೋಲಿಸಿ ಖುಷಿಪಡಬೇಕು ಎಂದು ಕೊಂಡಿದ್ದಾರೆ. ಇಲ್ಲಿ ಪ್ರಚಾರಕ್ಕೆ ಬಂದುವರು ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿ ಅಂತ ಹೇಳುವ ಬದಲು ಶೆಟ್ಟರ್ ನ್ನು ಸೋಲಿಸಿ ಅಂತ ಹೇಳಿದ್ದಾರೆ. ಆದರೆ ನಾನು ಪ್ರಚಾರಕ್ಕೆ ಹೋದಲ್ಲಿ ನಮ್ಮ ವಿರೋಧ ಪಕ್ಷದವರನ್ನು ಸೋಲಿಸಿ ಅಂತ ಹೇಳಿಲ್ಲಾ. ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿ ಅಂತ ಹೇಳಿದ್ದೇನೆ ಎಂದರು.