ಹುಬ್ಬಳ್ಳಿ: ನನ್ನ ಹಿಂದೆ ಯಾವುದೇ ಕಪ್ಪು ಚುಕ್ಕೆ ಇಲ್ಲಾ. ರಾಜಕಾರಣದಲ್ಲಿ ವ್ಯವಸ್ಥೆಯಾಗಿ, ಒಳ್ಳೆ ಆಡಳಿತ ಮಾಡಿದ್ದವರಿಗೆ ಟಿಕೆಟ್ ನೀಡದೆ ಇರುವುದು ಯಾಕೆ. ಧರ್ಮೇಂದ್ರ ಪ್ರದಾನ್, ಬೊಮ್ಮಾಯಿ, ಜೋಶಿ ಬಂದಿದ್ದರು. ಧರ್ಮೇಂದ್ರ ಪ್ರದಾನ್ ಅವರಿಗೆ ಅದೇ ಪ್ರಶ್ನೆ ಕೇಳಿದೆ. ದಯವಿಟ್ಟು ನನಗೆ ಯಾಕೆ ಟಿಕೆಟ್ ನೀಡಲು ನಿರಾಕರಣೆ ಮಾಡಿದ್ದಾರೆ ತಿಳಿಸಿ ಅಂದ್ರೆ ಪಾರ್ಟಿ ತೀರ್ಮಾನ ಅಂತ ಹೇಳಿದರು ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿದರು.
ನಗರದಲ್ಲಿ ನಿನ್ನೆ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾರ್ಟಿಯಲ್ಲಿ 6 ಸಲ ನಿಂತವರಿಗೆ 7 ನೇ ಬಾರಿ ನಿಲ್ಲಲು ಅವಕಾಶವಿಲ್ಲಾ ಎಂದು ಇದ್ದರೆ ಹೇಳಿ. ನನ್ನ ಬಗ್ಗೆ ಚಾರ್ಚಶಿಟ್ , ಕ್ರಿಮಿನಲ್ ಬ್ಯಾಗ್ರೌಂಡ್ ಇದ್ದರೆ ಹೇಳಿ . ಅದಕ್ಕೆ ಉತ್ತರವಿಲ್ಲಾ. ಅದಕ್ಕೆ ಪಾರ್ಟಿ ತೀರ್ಮಾನ ಎಂದು ಹೇಳಿದರು.
ನನ್ನಗೆ ಯಾವುದೇ ಅಧಿಕಾರ ಲಾಲಸೆ ಇಲ್ಲಾ. ರಾಜ ಕಾರಣಕ್ಕೆ ಬಂದಿರುವುದು ಆಕಸ್ಮಿಕ. ಹಲವಾರು ಜನರ ಹೋರಾಟದಲ್ಲಿ ಭಾಗವಹಿಸಿ ಕಾರಾಗೃಹ ಕ್ಕೆ ಹೋಗಿ ಬಂದಿದ್ದನೆ. ಪಾರ್ಟಿ ಕಟ್ಟಿದಂತಹ ವ್ಯಕ್ತಿ ಗೆ ಯಾಕೆ ಟಿಕೆಟ್ ಕೊಟ್ಟಿಲ್ಲಾ. 6 ಸಲ ಆರಿಸಿ ಬಂದ್ರು ಉತ್ತರ ಕರ್ನಾಟಕ ಅಭಿವೃದ್ಧಿಗೆ ಪ್ರಯತ್ನ ಮಾಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಟಿಕೆಟ್ ಕೊಡಲು ಯಾಕೆ ನಿರಾಕರಣೆ ಮಾಡಿದ್ದಾರೆ ಎಂಬುವುದಕ್ಕೆ ಯಾರು ಉತ್ತರ ನೀಡುತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.