News Karnataka Kannada
Monday, April 29 2024
ಹುಬ್ಬಳ್ಳಿ-ಧಾರವಾಡ

ಹುಬ್ಬಳ್ಳಿ: ಯಾವುದೇ ಬೆದರಿಕೆಗೆ ನಾನು ಬಗ್ಗಲ್ಲ ಜಗ್ಗಲ್ಲ ಎಂದ ಹನುಮಂತಸಾ ನಿರಂಜನ

i-wont-give-in-to-any-threat-hanumanthasa-niranjana
Photo Credit : News Kannada

ಹುಬ್ಬಳ್ಳಿ: ಬಿಜೆಪಿಯ ಶಿಸ್ತು ಸಮಿತಿಯಿಂದ ಪಕ್ಷದ ಹಿರಿಯ ನಾಯಕರ ಭಾವಚಿತ್ರ ಬಳಸಿಕೊಳ್ಳದಿರಲು ಬೆದರಿಕೆ ಈ ತಾಕೀತಿನ ಹಿಂದೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಇದ್ದಾರೆ . ಇಂತಹ ಬೆದರಿಕೆಗೆ ನಾ ಬಗ್ಗಲ್ಲ ಜಗ್ಗಲ್ಲ ಎಂದು ಬಿಜೆಪಿ ಮುಖಂಡ ಹನುಮಂತಸಾ ನಿರಂಜನ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಹ ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಕೇಂದ್ರ ಗೃಹ ಸಚಿವ ಅಮಿತಾ ಶಾ ಹೇಳತಾರೆ ಆಕಾಂಕ್ಷಿ ಅಭ್ಯರ್ಥಿಗಳು ಪಕ್ಷದ ನಾಯಕರ ಪೋಟೋ ಬಳಸಿಕೊಳ್ಳಬಹುದು. ಸ್ಥಳೀಯ ನಾಯಕರು ಅದಕ್ಕೆ ಮಹತ್ವ ನೀಡುತಿಲ್ಲ. ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಬೆದರಿಕೆ ಹಾಕತ್ತಾರೆ.

ಲಿಂಗರಾಜ ಪಾಟೀಲ ಮಾತನಾಡಿದ ಅಡಿಯೋ ರಿಲೀಸ್ ಮಾಡಿದ ಹನುಮಂತಸಾ ನಿರಂಜನ ಪಕ್ಷದ ನಿಷ್ಠಾವಂತ ಕಾರ್ಯಕರ್ತ ನಾನು. ನಾನು ಸಹ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರದ ಆಕಾಂಕ್ಷಿ ಅಭ್ಯರ್ಥಿ. ಶಿಸ್ತು ಸಮಿತಿ ನೀಡಿದ ಎಚ್ಚರಿಕೆಗೆ ನಾ ಮಹತ್ವ ಕೊಡಲ್ಲ. ಅವರು ನೀಡಿದ ಬೆದರಿಕೆಗೆ ಹಿರಿಯ ನಾಯಕರಿಗೆ ದೂರು ನೀಡುತ್ತೇನೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು