ಹುಬ್ಬಳ್ಳಿ: ಬಿಜೆಪಿಯವರದ್ದು ಡೋಂಗಿ ರಾಷ್ಟ್ರ ಭಕ್ತಿ. ಹರ್ ಘರ್ ತಿರಂಗಾ ಅಭಿಯಾನ ಮಾಡುವ ಮೂಲಕ ನಾಟಕವಾಡುತ್ತಿದ್ದಾರೆ. ಇದನ್ನು ವಿರೋಧಿಸಿದರೆ ರಾಜಕೀಯ ಅಂತಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾವರ್ಕರ್, ಬೋರವಾರ್ಕರ್ ಆರ್ಎಸ್ಎಸ್ ನವರು ಹಿಂದೆ ರಾಷ್ಟ್ರ ಧ್ವಜ ಹಾಗೂ ಸಂವಿಧಾನವನ್ನು ವಿರೋಧ ಮಾಡಿದ್ದರು ಎಂದು ಹೇಳಿದ್ದೇನೆ ತಪ್ಪೆನೀದೆ? ಇದರಲ್ಲಿ ರಾಜಕೀಯವೇನಿದೆ ಎಂದರು.
ಬಿಹಾರ ಜೆಡಿಯು ಹಾಗೂ ಎನ್ಡಿಎ ಮಧ್ಯೆ ಏನು ಸಮಸ್ಯೆ ಬಂದಿದೆ ನನಗೆ ಗೊತ್ತಿಲ್ಲ. ನಿತೀಶ್ ಕುಮಾರ್ ಎನ್ಡಿಎ ತೊರೆದು ಲಾಲು ಹಾಗೂ ಕಾಂಗ್ರೆಸ್ ಜೊತೆ ಸಂಬಂಧ ಬೆಳೆಸಿ ಒಳ್ಳೆಯದು ಮಾಡಿದ್ದಾರೆ. ಕೋಮುವಾದಿ ಪಕ್ಷವನ್ನು ಬಿಟ್ಟಿದ್ದು ಒಳ್ಳೆಯದು ಎಂದು ಹೇಳಿದರು.
ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಗೊತ್ತಿಲ್ಲ. ಮೂರನೇ ಸಿಎಂ ಆದ್ರೂ ಬರಲಿ ನಾಲ್ಕನೇಯವರು ಆದ್ರೂ ಬರಲಿ ನಮಗೆ ಸಂಬಂಧವಿಲ್ಲ. ಈ ಹಿಂದೆ ಯಡಿಯೂರಪ್ಪ ಅವರು ಸಿಎಂ ಸ್ಥಾನ ತೊರೆಯುವುದು ಮಾಹಿತಿ ಇತ್ತು ಹೇಳಿದ್ದೆ ಎಂದರು.