ಮೈಸೂರು: ತಾಯಿಂದ ಬೇರ್ಪಟ್ಟು ಕೋತಿ ಮರಿಯೊಂದು ತನ್ನ ತಾಯಿಗಾಗಿ ಹುಡುಕಾಡುತ್ತಿದ್ದ ಮನಕಲಕುವ ಘಟನೆ ನಂಜನಗೂಡಿನಲ್ಲಿ ನಡೆದಿದೆ.
ನಂಜನಗೂಡು ನಗರದ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದ ಬಳಿ ಕೋತಿ ಮರಿಯೊಂದು ತನ್ನ ತಾಯಿಯಿಂದ ಬೇರ್ಪಟ್ಟು ಅನಾಥವಾಗಿ ಬಿದ್ದಿದ್ದು, ತನ್ನ ತಾಯಿಯ ಹುಡುಕಾಟದಲ್ಲಿ ತೊಡಗಿರುವುದನ್ನು ಕಂಡು ಸ್ಥಳೀಯರು ಮರುಗಿದ್ದಾರೆ.
ಮನೆಯೊಂದರ ಕಟ್ಟಡದಲ್ಲಿ ಕೋತಿಯೊಂದು ಎತ್ತ ಕರುಳನ್ನೇ ಬಿಟ್ಟು ಹೋಗಿದ್ದು, ಕೋತಿಮರಿ ತನ್ನ ತಾಯಿಯ ಹುಡುಕಾಟದಲ್ಲಿ ಪರದಾಡುತ್ತಿರುವ ದೃಶ್ಯ ಮನಕಲಕುವಂತಿತ್ತು. ಇದನ್ನು ಕಂಡು ಸ್ಥಳೀಯರು ಗೋಳೂರು ಸ್ನೇಕ್ ಬಸವರಾಜ್ ಅವರಿಗೆ ದೂರವಾಣಿ ಮೂಲಕ ಕರೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಗೋಳೂರು ಸ್ನೇಕ್ ಬಸವರಾಜ್ ರವರು, ಕೋತಿಮರಿಯನ್ನು ರಕ್ಷಣೆ ಮಾಡಿ, ಅದಕ್ಕೆ ಹಾಲು ಕುಡಿಸಿ ಆರೈಕೆ ಮಾಡಿದರು.
ಬಳಿಕ ಮೈಸೂರಿನ ಪೀಪಲ್ಸ್ ಅನಿಮಲ್ಸ್ ಗೆ ಸುರಕ್ಷಿತವಾಗಿ ತೆಗೆದುಕೊಂಡು ಹೋಗಿ ಅದಕ್ಕೆ ಪ್ರಥಮ ಚಿಕಿತ್ಸೆ ನೀಡಿ ರಕ್ಷಿಸಿ ಅಲ್ಲೆ ಬಿಟ್ಟು ಬಂದಿದ್ದಾರೆ. ಸ್ನೇಕ್ ಬಸವರಾಜು ಅವರ ಕಾರ್ಯಕ್ಕೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.