ಹುಬ್ಬಳ್ಳಿ: ಜಗದೀಶ್ ಶೆಟ್ಟರ್ ಒಬ್ಬರು ಸರಳ, ಸಜ್ಜನ ನಾಯಕರಾಗಿದ್ದಾರೆ. ಕಳೆದ 30 ವರ್ಷಗಳಿಂದ ಉತ್ತರ ಕರ್ನಾಟಕ ಭಾಗದಲ್ಲಿ ತಳಮಟ್ಟದಿಂದ ಪಕ್ಷ ಕಟ್ಟಿದ್ದಾರೆ.ಪಕ್ಷದಲ್ಲಿ ಯಾವುದೇ ಒಂದು ಕಪ್ಪು ಚುಕ್ಕೆ ಇಲ್ಲದೇ ಕಾರ್ಯ ನಿರ್ವಹಣೆ ಮಾಡಿದ್ದಾರೆ ಎಂದು ಸಚಿವ ಶಂಕರಪಾಟೀಲ ಮುನೇನಕೊಪ್ಪ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ವರಿಷ್ಠರು ಒಂದು ನಿರ್ಣಯ ತೆಗೆದುಕೊಳ್ಳತ್ತಾರೆಂಬ ವಿಶ್ವಾಸವಿದೆ. ಶೆಟ್ಟರ್ ಮತ್ತು ಬಿಜೆಪಿ ಯಾವತ್ತೂ ಒಂದಾಗಿ ಇರುತ್ತದೆ. ಅವರು ಬಂಡಾಯವಾಗಿ ನಿಲ್ಲೋದು ಅಸಾಧ್ಯವಾದ ಮಾತು. ಅವರು ಯಾವತ್ತೂ ಪಕ್ಷದ ಜೊತೆಗೆ ಇರಲಿದ್ದಾರೆ.ಶೆಟ್ಟರ್ ಅವರಿಗೆ ಟಿಕೆಟ್ ತಪ್ಪಲು ಯಾರು ಕಾರಣರಲ್ಲ. ಇಂದು ವರಿಷ್ಢರು ಉತ್ತರ ನಿರ್ಧಾರ ತೆಗೆದುಕೊಳ್ಳತ್ತಾರೆಂಬ ವಿಶ್ವಾಸ ಇದೆ ಎಂದರು.