ಹುಬ್ಬಳ್ಳಿ: ಹು.ಧಾ ಸೆಂಟ್ರಲ್ ವಿಧಾನಸಭಾ ಮತಕ್ಷೇತ್ರದ ಚುನಾವಣಾ ಪ್ರಚಾರಾರ್ಥವಾಗಿ ವಾರ್ಡ್ ನಂ 50 ರ ಗಿರಣಿಚಾಳ ಪ್ರದೇಶದಲ್ಲಿ ಪ್ರಚಾರ ಸಭೆ ಜರುಗಿತು ಇದೆ ವೇಳೆಯಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ್ ತೆಂಗಿನಕಾಯಿ ಪಾದಯಾತ್ರೆಯ ಮೂಲಕ ಪ್ರಚಾರ ಕೈಗೊಂಡರು.
ಮತದಾರರ ಮನೆಗಳಿಗೆ ತೆರಳಿ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುವ ಮೂಲಕ ನನ್ನನ್ನು ಆಶೀರ್ವದಿಸುವಂತೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ಪ್ರಮುಖರಾದ ಶ್ರೀ ವಸಂತ ಹೊರಟ್ಟಿ, ಚಂದ್ರು ಮುಶೆಪ್ಪನವರ, ಹನುಮಂತಪ್ಪ ಮಾಳಪಲ್ಲಿ, ಸುರೇಶ ಯಾತಗೇರಿ ಹಾಗೂ ಇತರರು ಉಪಸ್ಥಿತರಿದ್ದರು.