ಹುಬ್ಬಳ್ಳಿ: ವಾರ್ಡ್ ನಂಬರ್ 66ರ ಅರಳಿಕಟ್ಟಿ ಓಣಿ, ತಿಮ್ಮಸಾಗರ ಓಣಿ, ದಿವಟೆಗಲ್ಲಿ, ಬ್ಯಾಳಿ ಓಣಿ ಸುತ್ತಲಿನ ಭಾಗದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಕ್ರಾಂತಿಕಿರಣ ಅವರು ಪಾದಯಾತ್ರೆ ಮೂಲಕ ಮನೆ ಮನೆಗೆ ತೆರಳಿ ಬಿರುಸಿನ ಪ್ರಚಾರ ನಡೆಸಿದರು.
ಪಾಲಿಕೆ ಸದಸ್ಯರಾದ ಶಿವು ಮೆಣಸಿನಕಾಯಿ, ದೀಪಕ್ ಮೆಹರವಾಡೆ, ಮುಖಂಡರಾದ ವಿನಾಯಕ ಲದ್ವಾ, ರಂಗಾ ಬದ್ದಿ, ಶಿವಾನಂದ ಮುತ್ತಣ್ಣವರ, ವಿನಯ ಸಜ್ಜಬರ, ಮಿಥುನ್ ಚವ್ಹಾಣ್, ದೀಪಕ್ ಲಾಳಗೆ, ಗಣೇಶ ಅಮರಾವತಿ, ಸುನೀತಾ ಜರತಾರಘರ, ಸವಿತಾ ಚವ್ಹಾಣ್, ಸುವರ್ಣ ಜಂಗಿನವರ, ಇನ್ನಿತರರು ಉಪಸ್ಥಿತರಿದ್ದರು.