ಹುಬ್ಬಳ್ಳಿ: ಸಚಿವ ಅಶ್ವಥ್ ನಾರಾಯಣರನ್ನು ಕೂಡಲೇ ಬಂಧಿಸಬೇಕು ಮಾಡಬೇಕು. ಮಂತ್ರಿಯಾಗಿ ಈ ರೀತಿ ಮಾತಾಡೋದು ಅವರ ಬದ್ಧತೆ ತೋರಿಸುತ್ತದೆ. ಬಿಜೆಪಿಯವರದ್ದು ಹೊಡಿ ಬಡಿ ಸರ್ಕಾರ ಎಂದು ಹುಬ್ಬಳ್ಳಿಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಸಲೀಂ ಅಹಮ್ಮದ್ ಹೇಳಿದರು.
ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಈ ಸರ್ಕಾರದ ಆಯಸ್ಸು ಕೇವಲ 60 ದಿನ. 60 ದಿನ ಆದ ಮೇಲೆ ಸರ್ಕಾರ ಹೋಗುತ್ತೆ. ಹೀಗಾಗಿ ಅವರು ಹುಚ್ಚಾಗಿ ಮಾತಾಡ್ತಾರೆ. ಸಿಟಿ ರವಿ, ಅಶ್ವಥ್ ನಾರಾಯಣ ಅವರದ್ದು ಎಲುಬಿಲ್ಲದ ನಾಲಿಗೆ. ಬಾಯಿಗೆ ಬಂದಂತೆ ಮಾತಾಡ್ತಾರೆ. ಮೋದಿ ನೂರು ಸಲ ಬಂದರೂ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ. ಇದು ಬಿಜೆಪಿ ಪಕ್ಷ ಅಲ್ಲ, ಭ್ರಷ್ಟಾಚಾರ ಜನತಾ ಪಾರ್ಟಿ, ಬೋಕರ್ ಜನತಾ ಪಾರ್ಟಿ ಎಂದು ವಾಗ್ದಾಳಿ ನಡೆಸಿದರು.
ರೈತರಿಗೆ ಪರಿಹಾರ ಕೊಡೋ ಯೋಗ್ಯತೆ ಇವರಿಗಿಲ್ಲ. ಅದನ್ನು ಬಿಟ್ಟು ಟಿಪ್ಪು, ಸಾವರ್ಕರ್ ಬೇಕಾ ಎಂದು ಮಾತಾಡ್ತಿದಾರೆ. ಇದು ಭ್ರಷ್ಟಾಚಾರದಲ್ಲಿ ಉದಯವಾದ ಪಾರ್ಟಿ, ಭ್ರಷ್ಟಾಚಾರದಲ್ಲಿ ಮುಳುಗಿದೆ. ಭಾವನೆಗಳಿಂದ ಸಮಾಜ ಒಡೆಯೋ ಕೆಲಸ ಮಾಡ್ತಿದಾರೆ. ಇವರು ಏನೇ ಮಾಡಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ. ರಾಜ್ಯದಲ್ಲಿ ನಾವು 150 ಸೀಟ್ ಗೆಲ್ಲ್ತೀವಿ ಎಂದು ಸಲೀಂ ಅಹಮದ್ ವಿಶಾಸ ವ್ಯಕ್ತಪಡಿಸಿದ್ದಾರೆ.