ಹುಬ್ಬಳ್ಳಿ: ಹೈ ವೋಲ್ವೇಜ್ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ಬಿಡುವಿಲ್ಲದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಪ್ರತಿಷ್ಠೆಯ ಕಣವಾಗಿರುವ ಸೆಂಟ್ರಲ್ ಕ್ಷೇತ್ರದಲ್ಲಿ ಶತಾಯ ಗತಾಯ ಗೆಲ್ಲಲೇಬೇಕು ಎಂದು ಹಠ ಹಿಡಿದಿರುವ ತೆಂಗಿನಕಾಯಿ ಹಗಲು ರಾತ್ರಿ ಎನ್ನದೇ ಮತಯಾಚನೆ ಮಾಡುತ್ತಿದ್ದಾರೆ.
ನಗರದ ವಾರ್ಡ್ ನಂಬರ್ 43ರ ಬಸವೇಶ್ವರ ಪಾರ್ಕ್ನಲ್ಲಿ ಮತ ಬೇಟೆಗೆ ಇಳಿದ ಮಹೇಶ್ ತೆಂಗಿನಕಾಯಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವದಾಗಿ ಭರವಸೆ ನೀಡಿದರು. ರಾತ್ರಿ ಹೊತ್ತಿನಲ್ಲಿಯೂ ಮತಯಾಚನೆ ಮಾಡಿದ ತೆಂಗಿನಕಾಯಿಗೆ ವಿಜಯ್ ಕುಮಾರ್ ಗುಡದ, ಅಶೋಕ ನರ್ತಿ, ಪ್ರಕಾಶ ಶೆಟ್ಟಿ, ಶಿವು ಹುಲಿಕಟ್ಟಿ, ಅನಿಲ್ ಕದಂ, ಕುಲಕರ್ಣಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಸಾಥ್ ಕೊಟ್ಟರು.