ಹುಬ್ಬಳ್ಳಿ: ನಗರದ ವಾರ್ಡ್ ಸಂಖ್ಯೆ 55ರ ಆಸರ ಹೊಂಡದಲ್ಲಿ ಇಂದು ಶಿಕ್ಕಲಗಾರ ಸಮಾಜದ ಪ್ರಮುಖರೊಂದಿಗೆ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಗದೀಶ್ ಶೆಟ್ಟರ್ ಪ್ರಚಾರ ಸಭೆ ನಡೆಸಿ, ಮತಯಾಚನೆ ಮಾಡಿದರು.
ನಂತರ ಮಾತನಾಡಿದ ಅವರು, ಕ್ಷೇತ್ರದ ಜನರ ಏಳಿಗೆಗಾಗಿ ದುಡಿಯುವ ನನ್ನ ಉತ್ಸಾಹ ಎಂದಿಗೂ ಕಡಿಮೆ ಆಗಲ್ಲ, ಕ್ಷೇತ್ರಕ್ಕಾಗಿ ಕ್ಷೇತ್ರದ ಜನರ ಒಳಿತಿಗಾಗಿ ನಾನು ಸದಾ ಶ್ರಮ ವಹಿಸಿ ಕಾರ್ಯನಿರ್ವಾಹಿಸುತ್ತೇನೆ. ಮುಂದೆಯೂ ಸಹ ಈ ಕಾರ್ಯ ಹೀಗೆ ಮುಂದುವರೆಯುತ್ತದೆ, ಅದಕ್ಕಾಗಿ ನಿಮ್ಮೆಲ್ಲರ ಸಹಕಾರ ನನಗೆ ಅತ್ಯಂತ ಅವಶ್ಯಕವಾಗಿದೆ ಎಂದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರು,ಹಿರಿಯರು, ಕಾರ್ಯಕರ್ತರು ಮತ್ತು ಸ್ಥಳೀಯರು ಪಾಲ್ಗೊಂಡಿದ್ದರು.