ಹುಬ್ಬಳ್ಳಿ : ಇಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಹುಟ್ಟು ಹಬ್ಬದ ಅಂಗವಾಗಿ, ಹುಬ್ಬಳ್ಳಿಯಲ್ಲಿನ ಶೆಟ್ಟರ್ ನಿವಾಸಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಭಕೋರಲು ಬಂದಿದ್ದರು. ಈ ವೇಳೆ ಶೆಟ್ಟರ್ ಅವರು ಸಿದ್ದರಾಮಯ್ಯ ಅವರಿಗೆ ಸನ್ಮಾನ ಮಾಡಲು ಹೋದಾಗ ಶೋಕಾಚರಣೆ ಇದೆ ಶೆಟ್ಟರೆ ಎಂದು ನಿರಾಕರಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸುತ್ತಿದ್ದಂತೆ,ಶಾಲು ಹಾಕಿ ಸನ್ಮಾನ ಮಾಡಲು ಹೋದಾಗ, ಸನ್ಮಾನ ನಿರಾಕರಿಸಿದ್ದು ಯಾಕೆ ಅಂದ್ರೆ, ಕುವೆತ್ ರಾಜ್ಯದ ನಾವಬ್ರಾದ ಎಮೀರ್ ಶೇಖ್ ನವಾಫ್ ಅಲ್ ಅಹಮ್ಮದ್ ಅಲ್ ಜಾಭರ್ ಅಲ್ ಸಭಾಹ್ ಡಿಸೆಂಬರ್ 16 ರಂದು ತಮ್ಮ 86 ನೇ ವಯಸ್ಸಿನಲ್ಲಿ ಸಾವನ್ನಪ್ಪಿದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೋಕಾಚರಣೆ ಇದೆ ಅದಕ್ಕೆ ಸನ್ಮಾನ ಬೇಡವೆಂದು ಹೇಳಿದರು.
Read More:
https://kannada.newskarnataka.com/world/desha/kuwait-emir-sheikh-nawaf-dies/17122023