News Karnataka Kannada
Saturday, April 27 2024
ಹುಬ್ಬಳ್ಳಿ-ಧಾರವಾಡ

ಚನ್ನಬಸವ ಸ್ವಾಮೀಜಿ ಲಿಂಗೈಕ್ಯೆ : ಹರಿದ ಬಂದ ಭಕ್ತ ಸಾಗರ

ಚನ್ನಬಸವ ಸ್ವಾಮೀಜಿ
Photo Credit : News Kannada

ಧಾರವಾಡ : ತಾಲೂಕಿನ ಗರಗ ಗ್ರಾಮದ ಐತಿಹಾಸಿಕ ಮಡಿವಾಳೇಶ್ವರ ಕಲ್ಮಠದ ಚನ್ನಬಸವ ಸ್ವಾಮೀಜಿ ಅವರು ಭಾನುವಾರ ಬೆಳಗಿನ ಜಾವ ಲಿಂಗೈಕ್ಯೆರಾಗಿದ್ದು, ಭಕ್ತರು ಅಂತಿಮ ದರ್ಶನ ಪಡೆದುಕೊಳ್ಳಲು ಆಗಮಿಸುತ್ತಿದ್ದಾರೆ.

ಕಳೆದ ಹಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸ್ವಾಮೀಜಿಗಳು ಇಂದು ಇಹಲೋಕ ತ್ಯಜಿಸಿದರು. ಸ್ವಾಮೀಜಿಗಳ ದರ್ಶನಕ್ಕೆ ಹಲವು ಮಠದ ಗಣ್ಯ ಸ್ವಾಮಿಗಳು ಸಹ ಆಗಮಿಸಿದ್ದರು. ಇನ್ನು ಅಂತಿಮ ದರ್ಶನವನ್ನು ಸೋಮವಾರ ಬೆಳಿಗ್ಗೆ 7 ಗಂಟೆಯವರೆಗೆ ಇರಿಸಿ, ನಂತರ ಹಂಗರಕಿ ಹಾಗೂ ಗರಗದಲ್ಲಿ ಮೆರವಣಿಗೆ ಮಾಡಿ, ತದನಂತರ ಅಂತ್ಯಕ್ರಿಯೆಯನ್ನು ಮಠದ ಆವರಣದಲ್ಲೇ ಮಾಡಲಾಗುವುದು.

ಚನ್ನಬಸವ ಸ್ವಾಮೀಜಿ ಅಂತಿಮ ದರ್ಶನ ಪಡೆಯಲು ಆಗಮಿಸಿದ ತೋಂಟದಾರ್ಯ ಮಠದ ಪೀಠಾಧಿಪತಿಗಳಾದ ಸಿದ್ದರಾಮ ಶ್ರೀಗಳು, ಮುಂಡರಗಿ ತೋಂಟದಾರ್ಯ ಮಠದ ನಿಜಗುಣಾನಂದ ಸ್ವಾಮೀಜಿ ಸೇರಿದಂತೆ ಹಲವರು ಸಂತಾಪ ವ್ಯಕ್ತಪಡಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು