ಧಾರವಾಡ : ತಾಲೂಕಿನ ಗರಗ ಗ್ರಾಮದ ಐತಿಹಾಸಿಕ ಮಡಿವಾಳೇಶ್ವರ ಕಲ್ಮಠದ ಚನ್ನಬಸವ ಸ್ವಾಮೀಜಿ ಅವರು ಭಾನುವಾರ ಬೆಳಗಿನ ಜಾವ ಲಿಂಗೈಕ್ಯೆರಾಗಿದ್ದು, ಭಕ್ತರು ಅಂತಿಮ ದರ್ಶನ ಪಡೆದುಕೊಳ್ಳಲು ಆಗಮಿಸುತ್ತಿದ್ದಾರೆ.
ಕಳೆದ ಹಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸ್ವಾಮೀಜಿಗಳು ಇಂದು ಇಹಲೋಕ ತ್ಯಜಿಸಿದರು. ಸ್ವಾಮೀಜಿಗಳ ದರ್ಶನಕ್ಕೆ ಹಲವು ಮಠದ ಗಣ್ಯ ಸ್ವಾಮಿಗಳು ಸಹ ಆಗಮಿಸಿದ್ದರು. ಇನ್ನು ಅಂತಿಮ ದರ್ಶನವನ್ನು ಸೋಮವಾರ ಬೆಳಿಗ್ಗೆ 7 ಗಂಟೆಯವರೆಗೆ ಇರಿಸಿ, ನಂತರ ಹಂಗರಕಿ ಹಾಗೂ ಗರಗದಲ್ಲಿ ಮೆರವಣಿಗೆ ಮಾಡಿ, ತದನಂತರ ಅಂತ್ಯಕ್ರಿಯೆಯನ್ನು ಮಠದ ಆವರಣದಲ್ಲೇ ಮಾಡಲಾಗುವುದು.
ಚನ್ನಬಸವ ಸ್ವಾಮೀಜಿ ಅಂತಿಮ ದರ್ಶನ ಪಡೆಯಲು ಆಗಮಿಸಿದ ತೋಂಟದಾರ್ಯ ಮಠದ ಪೀಠಾಧಿಪತಿಗಳಾದ ಸಿದ್ದರಾಮ ಶ್ರೀಗಳು, ಮುಂಡರಗಿ ತೋಂಟದಾರ್ಯ ಮಠದ ನಿಜಗುಣಾನಂದ ಸ್ವಾಮೀಜಿ ಸೇರಿದಂತೆ ಹಲವರು ಸಂತಾಪ ವ್ಯಕ್ತಪಡಿಸಿದರು.