ಹುಬ್ಬಳ್ಳಿ: ಇಡೀ ರಾಜ್ಯದಲ್ಲಿ ಕೇಂದ್ರ ನಾಯಕರು, ರಾಜ್ಯ ನಾಯಕರು ಪ್ರಚಾರ ಮಾಡ್ತಿದ್ದಾರೆ. ಅಭಿಯಾನ ಪ್ರಚಾರ ಯಶಸ್ವಿಯಾಗಿದೆ. ಬೊಮ್ಮಾಯಿ, ಯಡಿಯೂರಪ್ಪ ಮಾರ್ಗದರ್ಶನದ ನೇತೃತ್ವದಲ್ಲಿ ಮತ್ತೊಮ್ಮೆ ಬಹುಮತ ಸರ್ಕಾರ ಬರಲಿದೆ. ನಮ್ಮದು ಕಾರ್ಯಕರ್ತರ ಪಕ್ಷ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ 75 ಹೊಸ ಮುಖಕ್ಕೆ ಅವಕಾಶ ಮಾಡಿಕೊಡಲಾಗಿದೆ. ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ಕೊಡಲಾಗಿದೆ. ಹತ್ತಾರು ವರ್ಷ ಕೆಲಸ ಮಾಡಿದ ಮಹೇಶ್ ಟೆಂಗಿನಕಾಯಿಗೆ ಟಿಕೆಟ್ ಮತ್ತು ಹುಬ್ಬಳ್ಳಿ ಅಂತಹ ಕ್ಷೇತ್ರದಲ್ಲಿ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಕೊಡಲಾಗಿದೆ. ಡಬಲ್ ಇಂಜಿನ್ ಸರ್ಕಾರ ಯೋಜನೆ ಜನರಿಗೆ ತಲುಪಿವೆ. ಜನರ ಅಭಿಪ್ರಾಯ ಬಿಜೆಪಿ ಪರ ಇದೆ. ನರೇಂದ್ರ ಮೋದಿ ಸರ್ಕಾರ ಬಂದ ಮೇಲೆ ಅನೇಕ ಯೋಜನೆ ಜಾರಿ ಮಾಡಲಾಗಿದೆ ಎಂದರು.
ಕಾಂಗ್ರೆಸ್ ಜಾತಿ ಹೆಸರಲ್ಲಿ ರಾಜಕಾರಣ ಮಾಡ್ತಿದೆ. ಮೀಸಲಾತಿ ನೀಡಿರುವುದು ಇದು ಜನಮಾನಸದಲ್ಲಿ ಉಳದಿದೆ. ಎಲ್ಲಾ ಸಮುದಾಯಕ್ಕೆ ಬಿಜೆಪಿ ಸಮಾನತೆಯನ್ನು ಕೊಟ್ಟಿದೆ. ದೇವಸ್ಥಾನ, ಚರ್ಚ ತೆರೆವು ಮಾಡುವಾಗ ಮಾತನಾಡದ ಕಾಂಗ್ರೆಸ್ ಸರ್ಕಾರ ದರ್ಗಾ ತೆರೆವು ಮಾಡಿದ್ದಾಗ ಮಾತನಾಡಿದೆ. ರಸ್ತೆ ಅಗಲೀಕರಣಕ್ಕೆ ಕಾಂಗ್ರೆಸ್ ಸರ್ಕಾರ ತಡೆಯೊಡ್ಡಿದೆ. ನಮ್ಮ ಸರ್ಕಾರದ ಸಾಧನೆ ಅಭಿವೃದ್ಧಿ ಮುಖಾಂತರ ಜನರ ಬಳಿ ಹೋಗುತ್ತಾ ಇದ್ದೇವೆ.
ರಾಜ್ಯದಲ್ಲಿ ಬಿಜೆಪಿ ನಾಯಕರ ಪ್ರವಾಸ ಯಾರು ಕಂಡರಿಯದ ಸ್ವಾಗತ ಮಾಡಿದ್ದಾರೆ. ಹಳೆ ಮೈಸೂರು ನಲ್ಲಿ ನಮ್ಮ ನಿರೀಕ್ಷೆ ಮೀರಿ ಜನಸಾಗರ ಸೇರಿದ್ದಾರೆ. ಜೆಡಿಎಸ್ ಭದ್ರಕೋಟೆಯಲ್ಲಿ ಬಿಜೆಪಿ ಲಗ್ಗೆ ಹಾಕಿದೆ. ಮೋದಿ ಸರ್ಕಾರದ ಕಾರ್ಯಗಳನ್ನು ಜನ ಹೊಗಳುತ್ತಿದ್ದಾರೆ ಎಂದರು.