ಹುಬ್ಬಳ್ಳಿ: ರಾಜ್ಯ ಸರ್ಕಾರ ಮಹಿಳೆಯರಿಗೆ ಬಸ್ ವ್ಯವಸ್ಥೆ ಫ್ರೀ ನೀಡಿರುವ ಹಿನ್ನಲೆಯಲ್ಲಿ ಹುಬ್ಬಳ್ಳಿ ಆಟೋ ಚಾಲಕ ಮೃತ್ಯುಂಜಯ ಅವರು ವೀಡಿಯೊ ಮೂಲಕ ಸಿದ್ದು ಸರ್ಕಾರದ ವಿರುದ್ಧ ತನ್ನ ಅಳಲು ಹೊರಹಾಕಿದ್ದಾರೆ.
“ಸಿದ್ಧರಾಮಣ್ಣ ಇನ್ನೂ ಎರಡು ಭಾಗ್ಯ ಕೊಡಿ. ಒಂದು ಪುರುಷರಿಗೆ ಫ್ರೀ ಭಾಗ್ಯ. ಇನ್ನೊಂದು ಆಟೋ ಚಾಲಕರಿಗೆಲ್ಲ ವಿಷದ ಬಾಟಲಿ ಕೊಡಿಸುವ ಭಾಗ್ಯ!” ಎಂಬುವಂತ ಮನಕಲಕುವ ವೀಡಿಯೊ ನೋಡಗರ ಮನಕುಲಕವಂತಿದೆ.
ಸಿದ್ಧರಾಮಣ್ಣ ನೀವು ಬಂದ ತಕ್ಷಣ ನಮಗೆ ಯಾಕೆ ಈ ಶಿಕ್ಷೆ? ಇನ್ನೂ ಎರಡು ಭಾಗ್ಯ ಕೊಡಿ. ಒಂದು ಪುರುಷರಿಗೆ ಫ್ರೀ ಭಾಗ್ಯ, ಇನ್ನೊಂದು ನಮಗೆಲ್ಲ ವಿಷದ ಬಾಟಲಿ ಕೊಡಿಸಿ ಅಂತ ಹುಬ್ಬಳ್ಳಿಯ ಓರ್ವ ಆಟೋ ಡ್ರೈವರ್ ಸಾಮಾಜಿಕ ಜಾಲತಾಣದಲ್ಲಿ ಅಳಲು ತೋಡಿಕೊಂಡಿದ್ದಾರೆ.
ಸಿಎಂ ಅವರೇ, ನಮಗೆ ವಿಷದ ಬಾಟಲಿ ಕೊಟ್ಟು, ನಿಮ್ಮ ಸರ್ಕಾರದಿಂದ ನಮಗೆ ಮರಣ ಭಾಗ್ಯ ಕರುಣಿಸಿ, ನಿಮಗೆ ಮಹಿಳೆಯರು ಮಾತ್ರ ವೋಟ್ ಹಾಕಿಲ್ಲ, ಪುರುಷರೂ ವೋಟ್ ಹಾಕಿದ್ದಾರೆ. ಎಂದು ಕಣ್ಣೀರ ಕಹಾನಿ ಬಿಚ್ಚಿಟ್ಟಿದ್ದಾರೆ.
ನಿಮ್ಮ ತರಹ ಕೋಟಿ ರೂಪಾಯಿ ವಾಚ್ ಕಟ್ಟಲ್ಲ.10 ಕೆಜಿ ಅಕ್ಕಿ ಕೊಡ್ತೀನಿ ಎಂದು ಸಿದ್ದರಾಮಯ್ಯ ರೀತಿಯಲ್ಲಿಯೇ ಟಾಂಗ್ ನೀಡಿದ ಆಟೋ ಚಾಲಕ, ನಮಗೆ ಇರೋದೇ 10 ಕಿಲೋ ಮೀಟರ್, ಅದರಲ್ಲೂ ನೀವು ಫ್ರೀ ಕೊಟ್ಟಿದಿರಿ. ಹೀಗಾಗಿ ನಮಗೆ ಬದುಕಲು ಆಗ್ತಿಲ್ಲ. ನಗರದಲ್ಲಿ ಕೊಲೆ, ಸುಲಿಗೆ ಹೆಚ್ಚಾಗುತ್ತಿದೆ. ಇದಕ್ಕೆಲ್ಲ ಕಾರಣ ನೀವೇ. ನಿಮ್ಮ ರಾಜಕೀಯ ಲಾಭಕ್ಕಾಗಿ ನಮ್ಮನ್ನು ಬಲಿ ಕೊಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.