ಹುಬ್ಬಳ್ಳಿ: ಆಟೋರಿಕ್ಷಾ ಮಾಲಕರ ಹಾಗೂ ಚಾಲಕರ ಸಂಘದಿಂದ ಮಹಾ ಶಿವರಾತ್ರಿ ಮತ್ತು ಶ್ರೀ ಸಿದ್ಧಾರೂಢರ ಜಾತ್ರಾ ಅಂಗವಾಗಿ ಬರುವ ಭಕ್ತರಿಗೆ ಉಚಿತ ಸೇವೆಗೆ ಸಂಘದ ಅಧ್ಯಕ್ಷರಾದ ಶ್ರೀ ಶೇಖರಯ್ಯ ಮಠಪತಿ ಚಾಲನೆ ನೀಡಿದರು.
ಹಳೆ ಬಸ್ ನಿಲ್ದಾಣದಲ್ಲಿ ಮಲ್ಲಿಕಾರ್ಜುನ್ ನಂದಿಹಾಳ, ಮಾರುತಿ ಹಂಚಿಟ್ಠೇರಿ, ಗುರು ಬೆಟಗೇರಿ, ಮಹಾವೀರ್ ಬಿಲಾಣ ಮುರಳಿ ಇಂಗಳಹಳ್ಳಿ ರಾಜೇಶ್ ಬಿಜ್ವಾಡ್ ಸೇರಿದಂತೆ ಸುಮಾರು ನೂರಕ್ಕಿಂತ ಹೆಚ್ಚು ಆಟೋರಿಕ್ಷಾ ಚಾಲಕರು ಇದರಲ್ಲಿ ಪಾಲ್ಗೊಂಡಿದ್ದರು.