News Karnataka Kannada
Sunday, May 05 2024
ಹುಬ್ಬಳ್ಳಿ-ಧಾರವಾಡ

ಹಿರಿಯ ಜೀವಗಳಿಗೆ ಸೂರು, ಕಣ್ಣಂಚಲ್ಲಿ ಆನಂದಭಾಷ್ಪ

ಮೂವತ್ತು ನಲವತ್ತು ವರ್ಷಗಳಿಂದ ತನ್ನವರು ಎನ್ನುವವರು ಇಲ್ಲದೇ ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮಕ್ಕೆ ಬಂದು ವಾಸಿಸಲು ಸೂರಿಲ್ಲದೇ ಅವರಿವರ ಮನೆಯಲ್ಲಿ ವಾಸಿಸುತ್ತಾ ಬದುಕಿನ ದಾರಿ ಸವೆಸಿದ ಎರಡು ಹಿರಿಯ ಜೀವಗಳಿಗೆ ಕೊನೆಗೂ ಸೂರೊಂದು ಒದಗಿ ಬಂದಿದೆ.
Photo Credit : News Kannada

ಕುಂದಗೋಳ: ಮೂವತ್ತು ನಲವತ್ತು ವರ್ಷಗಳಿಂದ ತನ್ನವರು ಎನ್ನುವವರು ಇಲ್ಲದೇ ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮಕ್ಕೆ ಬಂದು ವಾಸಿಸಲು ಸೂರಿಲ್ಲದೇ ಅವರಿವರ ಮನೆಯಲ್ಲಿ ವಾಸಿಸುತ್ತಾ ಬದುಕಿನ ದಾರಿ ಸವೆಸಿದ ಎರಡು ಹಿರಿಯ ಜೀವಗಳಿಗೆ ಕೊನೆಗೂ ಸೂರೊಂದು ಒದಗಿ ಬಂದಿದೆ.

ಕಳೆದ 30-40 ವರ್ಷಗಳ ಹಿಂದೆ ಗುಡೇನಕಟ್ಟಿಗೆ ಆಗಮಿಸಿದ ಬಸಮ್ಮ, ಮುಶೇಮ್ಮ ಎಂಬ ವೃದ್ಧೆಯರು ಇಳಿವಯಸ್ಸಿನಲ್ಲಿ ಅವರಿವರ ಮನೆಯಲ್ಲಿ ಆಶ್ರಯ ಪಡೆಯುತ್ತಾ ಜೀವನ ಕಳೆದು ಮುಪ್ಪಿನ ಅವಸ್ಥೆಗೆ ಸಿಲುಕಿದ್ದರು. ಸದ್ಯ ಇವರ ಕೊನೆಗಾಲದಲ್ಲಿ ಗ್ರಾಮದ ಜನರ ಸಹಕಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಕಾಯಕಲ್ಪದಿಂದ ಮನೆಯೊಂದು ನಿರ್ಮಾಣ ಆಗುತ್ತಿದ್ದು ಆ ಕಾರ್ಯಕ್ಕೆ ಭೂಮಿಪೂಜೆ ನಡೆದಿದೆ.

ಬಸಮ್ಮ ಮುಶೇಮ್ಮ ವೃದ್ಧೆಯರ ಆಶ್ರಯಕ್ಕಾಗಿ ಗುಡೇನಕಟ್ಟಿ ಗ್ರಾಮದ ಶಿವಾನಂದ ಕಳಸಣ್ಣನವರ ಎಂಬುವವರು ಜಾಗ ನೀಡಿದರೆ, ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘ ಮನೆ ನಿರ್ಮಿಸುವ ಭರವಸೆ ನೀಡಿ ಭೂಮಿ ಪೂಜೆ ಕೈಗೊಂಡಿದೆ.

ಒಟ್ಟಾರೆ ನಾಲ್ಕು ದಶಕ ಅವರಿವರ ಮನೆಯಲ್ಲೇ ಕಾಲ ಕಳೆದ ವೃದ್ಧ ಜೀವಗಳಿಗೆ ಕೊನೆಗಾಲದಲ್ಲಿ ಮಂಜುನಾಥನ ಆಶೀರ್ವಾದದ ಫಲವಾಗಿ ಮನೆ ದೊರೆತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು