News Karnataka Kannada
Saturday, April 27 2024
ಹುಬ್ಬಳ್ಳಿ-ಧಾರವಾಡ

ಧಾರವಾಡಕ್ಕೆ ಐಐಟಿ ಭದ್ರ ಬುನಾದಿ ಹಾಕಿದ್ದೇ ಕಾಂಗ್ರೆಸ್: ವಿನಯ್ ಕುಲಕರ್ಣಿ

Vinay Kulkarni: Congress laid the foundation of IIT for Dharwad
Photo Credit : News Kannada

ಧಾರವಾಡ: ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದ್ದಾಗ ಧಾರವಾಡಕ್ಕೆ ಐಐಟಿ ಮಂಜೂರಾಗಿತ್ತು. ಇದು ಬುನಾದಿ ಹಾಕಿದ್ದೇ ಕಾಂಗ್ರೆಸ್ ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಹೇಳಿದ್ದಾರೆ.

ಮಾತನಾಡಿದ ಅವರು, ವಿದ್ಯಾಕಾಶಿ ಧಾರವಾಡದಲ್ಲಿ ಐಐಟಿ ಉದ್ಘಾಟನೆಯಾಗುತ್ತಿರುವುದು ನಮ್ಮೆಲ್ಲರಿಗೂ ಸಂತಸದ ವಿಷಯ. ಐಐಟಿಯನ್ನು ಕರ್ನಾಟಕಕ್ಕೆ ಕೊಟ್ಟ ವೇಳೆ ಇದು ರಾಯಚೂರಿಗೆ ಹೋಗಬೇಕು ಎಂದು ಚರ್ಚೆಗಳಾಗಿದ್ದವು. ಆಗ ನಾವೆಲ್ಲರೂ ಒಂದಾಗಿ ಹೋಗಿ ಈ ಐಐಟಿ ಕೇಂದ್ರ ಧಾರವಾಡದಲ್ಲೇ ಸ್ಥಾಪನೆಯಾಗಬೇಕು ಎಂದು ಒತ್ತಾಯ ಮಾಡಿದ್ದೆವು. ಆದರೂ ಆಗ ಐಐಟಿ ರಾಯಚೂರು ಬಿಟ್ಟು ಮೈಸೂರಿಗೆ ವರ್ಗಾವಣೆಯಾಯಿತು. ಮರಳಿ ಅದನ್ನು ಧಾರವಾಡಕ್ಕೆ ತರಲು ನಾವೆಲ್ಲ ದೊಡ್ಡ ಹೋರಾಟ ಮಾಡಬೇಕಾಯಿತು ಎಂದಿದ್ದಾರೆ.

ಅಂದು ಹೋರಾಟ ನಡೆಸಿದ ಪ್ರತಿಫಲವಾಗಿ ಇಂದು ಧಾರವಾಡದಲ್ಲಿ ಐಐಟಿ ಉದ್ಘಾಟನೆಯಾಗುತ್ತಿದೆ. ಅಂದಿನ ಕೈಗಾರಿಕಾ ಸಚಿವರಾಗಿದ್ದ ಆರ್.ವಿ ದೇಶಪಾಂಡೆ ಅವರು ಐಐಟಿಗೆ 500 ಎಕರೆ ಜಮೀನನ್ನು ಒದಗಿಸುವ ಕೆಲಸ ಮಾಡಿದರು. ಐಐಟಿ ಇಲ್ಲಿಗೆ ಬರಬೇಕಾದರೆ ಹಲವಾರು ಕಾಯ್ದೆಗಳಿದ್ದವು. ರೈಲ್ವೆ ಮಾರ್ಗ, ವಿಮಾನ ಸೌಕರ್ಯ, ಬಸ್ ಸೌಕರ್ಯ ಎಲ್ಲವನ್ನೂ ನಾವು ತೋರಿಸಿದ್ದೆವು. ಬಿಜೆಪಿ ಮುಖಂಡರು ಕೂಡ ನಮ್ಮ ಜೊತೆ ಸೇರಿ ಕೆಲಸ ಮಾಡಿದ್ದರು. ಎಲ್ಲರೂ ಸೇರಿ ಐಐಟಿ ಧಾರವಾಡಕ್ಕೆ ತರುವ ಕೆಲಸ ಮಾಡಿದ್ದೇವೆ ಎಂದರು.

ನಾವು ಈ ಹಿಂದೆ ಬೇಡಿಕೆ ಇಟ್ಟಂತೆ ಈ ಐಐಟಿಯಲ್ಲಿ 25%ರಷ್ಟು ಕರ್ನಾಟಕದ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಕಲ್ಪಿಸಬೇಕು. ಐಐಟಿಗೆ ಭೂಮಿ ನೀಡಿದಂತಹ ಮಕ್ಕಳಿಗೆ ಅಲ್ಲಿ ಡಿ ದರ್ಜೆ ಕೆಲಸ ನೀಡಬೇಕು. ನಾಳೆ ನಡೆಯುವ ಉದ್ಘಾಟನೆ ವೇಳೆ ಇದನ್ನು ಘೋಷಣೆ ಮಾಡಬೇಕು ಎಂದು ವಿನಯ್ ಕುಲಕರ್ಣಿ ಆಗ್ರಹಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು