ಹುಬ್ಬಳ್ಳಿ,ಅ.23 : ಯಾವುದೇ ಕಾರಣಕ್ಕೂ ಯಾವುದೇ ಪಕ್ಷದ ಮೇಲೆ ಸಾಫ್ಟ್ಕಾರ್ನರ್ ಇಲ್ಲ. ಉಪಚುನಾವಣೆಯಲ್ಲಿ ಸಿಂಧಗಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯ ಗೆಲುವು ನಿಶ್ಚಿತ ಎಂದು ಜೆಡಿಎಸ್ ಮುಖಂಡ ಹೆಚ್.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಕಳೆದ ಐದು ದಿನಗಳಿಂದ ಸಿಂಧಗಿಯಲ್ಲಿ ಪ್ರಚಾರದಲ್ಲಿ ಭಾಗವಹಿದ್ದಾಗ ಜನರ ಪ್ರತಿಕ್ರಿಯೆ ಉತ್ತಮವಾಗಿದೆ. ಈ ಹಿಂದೆ ದೇವೆಗೌಡರ ಆಡಳಿತ, ನನ್ನ ಆಡಳಿತ ಅವಯಲ್ಲಿ ಜನರಿಗೆ ಕೊಟ್ಟಿರುವ ನೀರಾವರಿ, ಸಾಲಮನ್ನಾ ಸೇರಿದಂತೆ ಇನ್ನಿತರ ಯೋಜನೆಗಳ ಬಗ್ಗೆ ಹಳ್ಳಿ ಹಳ್ಳಿಗಳಲ್ಲಿ ಜನರು ಸ್ಮರಿಸಿ ಮಾತನಾಡುತ್ತಿದ್ದಾರೆ. ಹಾಗಾಗಿ ಯಾವುದೇ ಸಂಶಯವಿಲ್ಲದೇ ಸಿಂಧಗಿಯಲ್ಲಿ ಜೆಡಿಎಸ್ ಗೆಲುವು ಸಾಸಲಿದೆ ಎಂದರು.
ಹಾನಗಲ್ಗೆ ಇಂದು ಭೇಟಿ ನೀಡುತ್ತಿದ್ದೇನೆ. ಅಲ್ಲಿ ಸಿ.ಎಮ್.ಉದಾಸಿ ಅವರು ಜೆಡಿಎಸ್ ಪಕ್ಷ ಬಿಟ್ಟು ಬಿಜೆಪಿ ಸೇರಿದ ಬಳಿಕ ಪಕ್ಷದ ಶಕ್ತಿ ಕುಂದಿದೆ. 2004 ರಿಂದ ನಾಯಕತ್ವದ ಕೊರತೆ ಕಾಡುತ್ತಿದೆ. ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಮುಂಚಿತವಾಗಿಯೇ ಘೋಷಣೆ ಮಾಡಲಾಗಿದ್ದು, ಅಲ್ಲಿ ಪ್ರಚಾರ ಕಾರ್ಯ ನಡೆಸಿ ಜನರ ನಾಡಿಮೀಡಿತ ಅರಿತು ಮಾತನಾಡುವೆ ಎಂದರು.
ಜೆಡಿಎಸ್ ಗೆ ಸಿದ್ದರಾಮಯ್ಯ ಅವರೇ ಟಾರ್ಗೆಟ್ ಆಗಿದ್ದಾರಾ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಅವರು ಇಲ್ಲದೇ ಹೋದರೆ ಕಾಂಗ್ರೆಸ್ಗೆ ಜೆಡಿಎಸ್ನಿಂದ ಯಾವುದೇ ಅಡೆತಡೆ ಇಲ್ಲ ಎಂಬ ಭಾವನೆ ಅವರಿಗೆ ಇರಬಹುದು. ಹಾಗಾಗಿ ಅವರಿಗೆ ಮನವಿ ಮಾಡುತ್ತೇನೆ ಪದೇ ಪದೇ ನಮ್ಮ ಪಕ್ಷದ ಹೆಸರು, ನನ್ನ ಹೆಸರನ್ನು ಬಳಸಿ ನಿಮ್ಮ ವರ್ಚಸ್ಸು ಮತ್ತು ರಾಜಕೀಯ ಶಕ್ತಿಯನ್ನು ಕುಂದಿಸಿಕೊಳ್ಳುವ ಕೆಲಸ ಮಾಡಬೇಡಿ ಎಂದು ಎಚ್ಚರಿಕೆ ನೀಡಿದರು.
ನಾನು ಯಾರ ಮೇಲೆ ವೈಯಕ್ತಿಕ ನಿಂದನೆ ಮಾಡಿಲ್ಲ. ಎಲ್ಲ ನಾಯಕರು ಹೇಳುವಂತದ್ದು ಚುನಾವಣೆ ಇರಬಹುದು, ಸಾರ್ವಜನಿಕವಾಗಿರಬಹುದು ನೀವು ಜನಪ್ರತಿನಿಗಳಾಗಿ ಸರ್ಕಾರ ನಡೆಸಬೇಕಾದರೇ ಏನೂ ಅಭಿವೃದ್ಧಿ ಕೆಲಸ ಮಾಡಿದ್ದೀರಿ ಅದರ ಬಗ್ಗೆ ಚರ್ಚೆ ನಡೆಸಬೇಕು. ವೈಯಕ್ತಿಕ ಚರ್ಚೆ ಮಾಡಿದರೇ ಒಬ್ಬರಿಗೊಬ್ಬರು ಕೆಸರು ಎರಚುವ ಕೆಲಸ ಮಾಡಬೇಕಾಗುತ್ತದೆ ಅದಕ್ಕೆ ಅಂತ್ಯ ಎಂಬುದೇ ಇರುವುದಿಲ್ಲ. ಜೆಡಿಎಸ್ ಬಿಜೆಪಿ ಬಿ ಟೀಮ್ ಅಲ್ಲ. ಹಾಗಿದ್ದರೆ ಈ ಹಿಂದೆ ಕಾಂಗ್ರೆಸ್ನೊಂದಿಗೆ ಸರ್ಕಾರ ಮಾಡುತ್ತಿರಲಿಲ್ಲ ಎಂದರು.