ಧಾರವಾಡ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ‘ಅಖಿಲ ಭಾರತ ಕಾರ್ಯಕಾರಿ ಮಂಡಳಿಯ ಬೈಠಕ್’ ಅ.28, 29, 30ರಂದು ಮೂರು ದಿನಗಳ ಕಾಲ ಗರಗ ರಸ್ತೆಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ನಡೆಯಲಿದೆ ಸಂಘದ ಅಖಿಲ ಭಾರತೀಯ ಪ್ರಚಾರ ಪ್ರಮುಖ ಸುನೀಲ ಅಂಬೇಕರ ತಿಳಿಸಿದರು.
ನಗರದ ಹೊರಹೊಲಯದ ಗರಗ ರಾಷ್ಟೊçತ್ಥಾನ ಶಾಲೆಯಲ್ಲಿ ಮಂಗಳವಾರ ಬೈಠಕ್ ಕುರಿತು ಸುದ್ದಿಗೋಷ್ಠಿ ನಡೆಸಿದ ಅವರು, ಪ್ರತಿವರ್ಷವು ಸಂಘದ ಕಾರ್ಯಕಾರಿ ಮಂಡಳಿಯ ಬೈಠಕ್ ನಡೆಯಲಿದೆ. ಬೈಠಕ್ನಲ್ಲಿ 350 ಪ್ರಾಂತದ ಎಲ್ಲ ಪ್ರಮುಖ ಕಾರ್ಯಕರ್ತರು ಆಗಮಿಸಲಿದ್ದಾರೆ ಎಂದರು.
ಕೋವಿಡ್ ಮುನ್ನಚ್ಚರಿಕೆ ಕ್ರಮಗಳೊಂದಿಗೆ ನಡೆಯುವ ಈ ಬೈಠಕ್ನಲ್ಲಿ ಮುಂದಿನ ಯೋಜನೆಗಳ ಬಗ್ಗೆ, ಕಾರ್ಯಕರ್ತರ ಬಗ್ಗೆ ಬೈಠಕ್ನಲ್ಲಿ ಚರ್ಚೆ ನಡೆಯಲಿದೆ. ಸದ್ಯ ಬಾಂಗ್ಲಾ ದೇಶದಲ್ಲಿ ನಡೆಯುವ ಹಿಂದೂಗಳ ಮೇಲೆ ದಾಳಿ, ದೇವಾಲಯಗಳ ಧ್ವಂಸದ ಕುರಿತು ಚರ್ಚಿಸಲಿದೆ ಎಂದು ಹೇಳಿದರು.
ಜುಲೈ ತಿಂಗಳಲ್ಲಿ ನಡೆಯಬೇಕಿದ್ದ ಈ ಬೈಠಕ್, ಕೋವಿಡ್ ಹಿನ್ನಲೆ ರದ್ದುಗೊಂಡಿತು. ಆದರೆ, ಈಗ ಕೋವಿಡ್ ಕಡಿಮೆಯಾಗಿದೆ. ಆದಾಗ್ಯೂ ಅಗತ್ಯ ಮುನ್ನಚ್ಚರಿಕೆ ಕ್ರಮಗಳೊಂದಿಗೆ ಈ ಬೈಠಕ್ ಆಯೋಜಿಸಿದೆ. ದೇಶ ಹಾಗು ಜಗತ್ತಿನ ಆಗುಹೊಗುಗಳ ಬಗ್ಗೆ ಸಮಗ್ರ ಚರ್ಚೆ ನಡೆಯಲಿದೆ ಎಂದರು.