ಬೆಳಗಾವಿ, ನ.5: ಕಲುಷಿತ ನೀರು ಕುಡಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಇದರೊಂದಿಗೆ ಕಲುಷಿತ ನೀರಿನಿಂದ ಸಾವನ್ನಪ್ಪಿದವರ ಸಂಖ್ಯೆ ಮೂರಕ್ಕೆ ತಲುಪಿದೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮುದೇನೂರು ನಿವಾಸಿ ವಿಠಲ್ ಹನ್ಮಂತ್ ಗುಡಿಹಿಂದ್ (40) ಮೃತಪಟ್ಟವರು. ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಅಕ್ಟೋಬರ್ 27 ರಂದು ಕಲುಷಿತ ನೀರು ಕುಡಿದ ನಂತರ, 94 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ಯಾಸ್ಟ್ರೊಎಂಟರೈಟಿಸ್ ನಿಂದಾಗಿ ವಿಠಲ್ ಅವರನ್ನು ರಾಮದುರ್ಗದ ತಾಲ್ಲೂಕು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು ಮತ್ತು ನಂತರ ಅಕ್ಟೋಬರ್ ೨೮ ರಂದು ಬಾಗಲಕೋಟೆಗೆ ಸ್ಥಳಾಂತರಿಸಲಾಯಿತು. ನಾಲ್ಕು ದಿನಗಳ ಹಿಂದೆ ಅವರನ್ನು ಬಿಡುಗಡೆ ಮಾಡಲಾಯಿತು, ಆದರೆ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ, ನವೆಂಬರ್ 4ರ ಶುಕ್ರವಾರ ಅವರನ್ನು ಬಾಗಲಕೋಟೆಯ ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ಅವರು ನಿಧನರಾದರು.
ಸರಸ್ವತಿ ನಿಂಗಪ್ಪ ಹವಳ್ಳಿ (70) ಅಕ್ಟೋಬರ್ 23 ರಂದು ಮತ್ತು ಶಿವಪ್ಪ ಯಂಡಗೇರಿ (70) ಅಕ್ಟೋಬರ್ 27 ರಂದು ನಿಧನರಾದರು. ಶಿವಪ್ಪ ಅವರ ಕುಟುಂಬಕ್ಕೆ ಸರ್ಕಾರ 10 ಲಕ್ಷ ರೂ.ಗಳ ಪರಿಹಾರವನ್ನು ಘೋಷಿಸಿದೆ.