ಮಂಗಳೂರು,ನ.6: ಮಂಗಳೂರು ಮಹಾನಗರ ಪಾಲಿಕೆಯ ಪಾರ್ಕ್ ಗಳ ಅಭಿವೃದ್ಧಿ ಮತ್ತು ನಿರಂತರ ಚಟುವಟಿಕೆ ಗಳಿಗೆ ಪ್ರೋತ್ಸಾಹ ನೀಡುವುದಾಗಿ ಮಾನಪಾ ಆಯುಕ್ತ ಅಕ್ಷಯ ಶ್ರೀಧರ್ ತಿಳಿಸಿದ್ದಾರೆ.
ಕಲಾ ಸಾಧನಾ ಮ್ಯೂಸಿಕ್ ಸ್ಕೂಲ್, ಮಂಗಳೂರು ನಾರ್ತ್ ಇನ್ನರ್ ವ್ಹೀಲ್ ಕ್ಲಬ್ ಮತ್ತು ದೇವಿಕಾ ಯೋಗ ಕ್ಲಾಸ್ ಮಂಗಳೂರು ಇದರ ಸಹಯೋಗದಲ್ಲಿ ನಗರದ ಹ್ಯಾಟ್ ಹಿಲ್ ಬಳಿ ಇರುವ ಇಂದಿರಾ ಪ್ರಿಯದರ್ಶಿನಿ ವನಿತಾ ಪಾರ್ಕ್ ನಲ್ಲಿಂದು ಸಂಗೀತ ಸಂಭ್ರಮ ಕಾರ್ಯಕ್ರ ಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮಂಗಳೂರು ಮಹಾನಗರ ಪಾಲಿಕೆಯ ಪಾರ್ಕ್ ಗಳು ಸಾರ್ವಜನಿಕ ರ ಬಳಕೆಗೆ ಮತ್ತು ನಿರಂತರ ಚಟುವಟಿಕೆ ಗಳಿಗೆ ವಿಶ್ರಾಂತಿ ಪಡೆಯಲು ಸೂಕ್ತ ವಾಗುವ ರೀತಿಯಲ್ಲಿ ಅಭಿವೃದ್ಧಿ ಪಡಿಸ ಲಾಗುತ್ತಿದೆ ಎಂದು ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ ತಿಳಿಸಿದ್ದಾರೆ.
ಉದ್ಘಾಟನಾ ಕಾರ್ಯಕ್ರಮ ದಲ್ಲಿ ಎಸ್ ಸಿ ಡಿ ಸಿಸಿ ಬ್ಯಾಂಕ್ ಸಿಇಒ ಗೋಪಾ ಲ ಕೃಷ್ಣ ಭಟ್ ಮಾತನಾಡುತ್ತಾ,ತಾನ್ ಸೇನ್ ನಂತಹ ಮಹಾನ್ ಸಂಗೀತ ಸಾಧಕನಿಗೆ ಸಂಗೀತದ ಮೂಲಕ ದೀಪ ಬೆಳಗಿಸುವ ಶಕ್ತಿ ಇತ್ತು ಎನ್ನುವುದನ್ನು ಕೇಳಿದ್ದೇವೆ. ಸಂಗೀತ ಸಂಭ್ರಮ ದಂತಹ ಕಾರ್ಯಕ್ರಮ ನಮ್ಮಲ್ಲಿಸಕಾರಾತ್ಮಕ ಶಕ್ತಿಯನ್ನು ತುಂಬಿಸುವ ಶಕ್ತಿ ಯನ್ನು ಹೊಂದಿದೆ ಎಂದು ಶುಭ ಹಾರೈಸಿದರು.
ನಿವೃತ್ತ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮ, ಮಂಗ ಳೂರು ವಲಯ ಅರಣ್ಯ ಅಧಿಕಾರಿ ಪ್ರಶಾಂತ್ ಪೈ, ಸಹಾಯಕ ಕಾರ್ಯ ನಿರ್ವಾ ಹಕ ಅಭಿಯಂತರರಾದ ಚಂದ್ರಶೇಖರಯ್ಯ, ಕಾರ್ಪೋರೇಷನ್ ಬ್ಯಾಂಕ್ ನ ನಿವೃತ್ತ ಅಧಿಕಾರಿಗಳಾದ ಪಾಂಡು ರಂಗ ಆಚಾರ್ಯ, ಗಣೇಶ್ ಶೆಣೈ,ದ.ಕ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀ ನಿವಾಸ ನಾಯಕ್ ಇಂದಾಜೆ,ಪತ್ರ ಕರ್ತರ ಸಂಘದ ರಾಷ್ಟ್ರೀಯ ಕಾರ್ಯ ಕಾರಿ ಸಮಿತಿ ಸದಸ್ಯ ಪಿ.ಬಿ.ಹರೀಶ್ ರೈ ,ಇನ್ನರ್ ವೀಲ್ ಮಂಗಳೂ ರು ನಾರ್ತ್ ಇದರ ಅಧ್ಯಕ್ಷ ರಾದ ವಸಂತಿ ಕಾಮ ತ್,ದ.ಕ.ಜಿಲ್ಲಾ ರೆಡ್ ಕ್ರಾಸ್ ಘಟಕದ ಖಜಾಂಜಿ ಮೋಹನ್ ಶೆಟ್ಟಿ, ಸದಸ್ಯ ರಾದ ರವೀಂದ್ರ ನಾಥ ಉಚ್ಚಿಲ್ ,ಇನ್ನರ್ ವೀಲ್ ನ ಕಾರ್ಯದರ್ಶಿ ಗೀತಾ ರೈ,ದೇವಿಕಾ ಯೋಗ ಕ್ಲಾಸ್ ನ ಸಂಚಾಲಕರಾ ದ ದೇವಿಕಾ ಪುರು ಷೋತ್ತಮ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಭಾಸ್ಕರ್ ರೈ ಕಾರ್ಯಕ್ರಮ ನಿರೂಪಿಸಿದರು. ಪುಷ್ಪ ರಾಜ್ ಬಿ.ಎನ್ ವಂದಿಸಿದರು. ಕಲಾ ಸಾಧನಾ ಮ್ಯೂಸಿಕ್ ಸ್ಕೂಲ್ ನ ನಿರ್ದೇಶಕಿ ವಿಭಾ ಶ್ರೀ ನಿವಾಸನಾಯಕ್ ರವರಿಂದ ಸಂಗೀತ ಸಂಭ್ರಮ ಕಾರ್ಯಕ್ರಮ ನಡೆಯಿತು. ಅಶ್ವಿತ್ ತಬಲ ಹಾಗೂ ಅತ್ರಯ್ ಹಾರ್ಮೂನಿಯಂ ಮೂಲಕ ಸಾಥ್ ನೀಡಿದರು.