ಬಾಗಲಕೋಟೆ : ಅಬಕಾರಿ ಇಲಾಖೆ ಅಧಿಕಾರಿಗಳು ವಿವಿಧೆಡೆ ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದ 2 ಸಾವಿರ ಪ್ಯಾಕೇಟ್ ಕಳ್ಳಬಟ್ಟಿಯನ್ನು ಶುಕ್ರವಾರ ನಾಶ ಪಡಿಸಿದ್ದಾರೆ.
ಅಬಕಾರಿ ಉಪ ಆಯುಕ್ತ ಎಚ್.ರಮೇಶಕುಮಾರ, ಅಬಕಾರಿ ಉಪ ಅಧೀಕ್ಷಕ ಎಸ್.ಎನ್.ಹಿರೇಮಠ, ಅಬಕಾರಿ ಉಪ ಅಧೀಕ್ಷಕ ಆರ್.ಎಂ.ಮುದಿಗೌಡರ ನೇತೃತ್ವದ ತಂಡ ಬಾಗಲಕೋಟೆ ವಲಯ ಕಚೇರಿ ವ್ಯಾಪ್ತಿಯಲ್ಲಿ ವಿವಿಧೆಡೆ ಅಬಕಾರಿ ದಾಳಿ ನಡೆಸಿದ್ದರು. ಪ್ರಕರಣ ದಾಖಲಿಸಿ ವಶಕ್ಕೆ ಪಡೆದಿದ್ದ 2 ಸಾವಿರ ಪ್ಯಾಕೇಟ್ ಕಳ್ಳಬಟ್ಟಿ, ಅದರ ಜತೆಗೆ 610 ಲೀಟರ ಬೆಲ್ಲದ ರಸಾಯನ, 198 ಲೀಟರ್ ಭಾರತೀಯ ತಯಾರಿಕೆ ಮದ್ಯ, 244 ಲೀಟರ್ ಸ್ಟಿರಿಟ್, 20 ಲೀಟರ್ ಬಿಯರ್, 1 ಲೀಟರ್ ದಷ್ಟು ಕೆದ್ಯಾಮಲ್ ನಾಶಪಡಿಸಲಾಯಿತು.
ಈ ಸಂದರ್ಭದಲ್ಲಿ ಅಬಕಾರಿ ನಿರೀಕ್ಷಕ ಶಿವಾನಂದ ಹೂಗಾರ, ನಿರೀಕ್ಷಕ ವಿಠಲ ಪರಗಣ್ಣವರ ಹಾಗೂ ಸಿಬ್ಬಂದಿ ವರ್ಗದವರು ಇದ್ದರು.