News Karnataka Kannada
Sunday, April 28 2024
ಬಾಗಲಕೋಟೆ

2 ಸಾವಿರ ಕಳ್ಳಬಟ್ಟಿಯನ್ನು ನಾಶಪಡಿಸಿದ ಅಬಕಾರಿ ಇಲಾಖೆ

New Project 2021 09 17t221835.238
Photo Credit :
ಬಾಗಲಕೋಟೆ : ಅಬಕಾರಿ ಇಲಾಖೆ ಅಧಿಕಾರಿಗಳು ವಿವಿಧೆಡೆ ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದ 2 ಸಾವಿರ ಪ್ಯಾಕೇಟ್ ಕಳ್ಳಬಟ್ಟಿಯನ್ನು ಶುಕ್ರವಾರ ನಾಶ ಪಡಿಸಿದ್ದಾರೆ.

ಅಬಕಾರಿ ಉಪ ಆಯುಕ್ತ ಎಚ್.ರಮೇಶಕುಮಾರ, ಅಬಕಾರಿ ಉಪ ಅಧೀಕ್ಷಕ ಎಸ್.ಎನ್.ಹಿರೇಮಠ, ಅಬಕಾರಿ ಉಪ ಅಧೀಕ್ಷಕ ಆರ್.ಎಂ.ಮುದಿಗೌಡರ ನೇತೃತ್ವದ ತಂಡ ಬಾಗಲಕೋಟೆ ವಲಯ ಕಚೇರಿ ವ್ಯಾಪ್ತಿಯಲ್ಲಿ ವಿವಿಧೆಡೆ ಅಬಕಾರಿ ದಾಳಿ ನಡೆಸಿದ್ದರು. ಪ್ರಕರಣ ದಾಖಲಿಸಿ ವಶಕ್ಕೆ ಪಡೆದಿದ್ದ 2 ಸಾವಿರ ಪ್ಯಾಕೇಟ್ ಕಳ್ಳಬಟ್ಟಿ, ಅದರ ಜತೆಗೆ 610 ಲೀಟರ ಬೆಲ್ಲದ ರಸಾಯನ, 198 ಲೀಟರ್ ಭಾರತೀಯ ತಯಾರಿಕೆ ಮದ್ಯ, 244 ಲೀಟರ್ ಸ್ಟಿರಿಟ್, 20 ಲೀಟರ್ ಬಿಯರ್, 1 ಲೀಟರ್ ದಷ್ಟು ಕೆದ್ಯಾಮಲ್ ನಾಶಪಡಿಸಲಾಯಿತು.

ಈ ಸಂದರ್ಭದಲ್ಲಿ ಅಬಕಾರಿ ನಿರೀಕ್ಷಕ ಶಿವಾನಂದ ಹೂಗಾರ, ನಿರೀಕ್ಷಕ ವಿಠಲ ಪರಗಣ್ಣವರ ಹಾಗೂ ಸಿಬ್ಬಂದಿ ವರ್ಗದವರು ಇದ್ದರು.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು