ಬಾಗಲಕೋಟೆ : ಸಾರ್ವಜನಿಕರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎನ್ನುವ ದೂರುಗಳು ಕೇಳಿ ಬಂದಿವೆ. ನಗರಸಭೆ ಸಿಬ್ಬಂದಿಗಳು ಎಚ್ಚರದಿಂದ ಕಾರ್ಯ ನಿರ್ವಹಿಸಬೇಕು. ನಿರ್ಲಕ್ಷ ಧೋರಣೆ ಸಹಿಸಲು ಸಾಧ್ಯವಿಲ್ಲ ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು.
ನವನಗರದ ನಗರಸಭೆ ಸಭಾಭವನದಲ್ಲಿ ಬುಧವಾರ ಬಾಗಲಕೋಟೆ ನಗರಸಭೆ ಸಾಮಾನ್ಯ ಸಭೆಯಲ್ಲಿ ಸಿಬ್ಬಂದಿಗಳ ಕಾರ್ಯಗಳ ಬಗ್ಗೆ ಸದಸ್ಯರು ಧ್ವನಿ ಎತ್ತುತ್ತಿದ್ದಂತೆ ಕೆಂಡಾಮAಡಲರಾದ ಅವರು, ಜನನ, ಮರಣ ಪ್ರಮಾಣ ಪತ್ರ, ನಿವೇಶನ ಉತಾರ ನೀಡುವಲ್ಲಿ ಲಂಚ ಸ್ವೀಕರಿಸುತ್ತಾರೆ ಎನ್ನುವ ಆರೋಪ ಕೇಳಿ ಬಂದಿದೆ. ಸಾರ್ವಜನಿಕರಿಗೆ ಸತಾಯಿಸುವುದು, ಹಣಕ್ಕಾಗಿ ಪಿಡಿಸುವುದು ಸರಿಯಲ್ಲ. ನಗರಸಭೆ ಗೌರವಕ್ಕೆ ಧಕ್ಕೆ ತರುವಂತೆ ಕೆಲಸ ಮಾಡಬಾರದು. ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡಿದ ಮೂರು ಜನ ಸಿಬ್ಬಂದಿಗಳಿಗೆ ಶೋಕಾಸ್ ನೋಟಿಸ್ ನೀಡುವಂತೆ ನಗರಸಭೆ ಆಯುಕ್ತರಿಗೆ ಸೂಚನೆ ನೀಡಿದರು.
ಬಾಗಲಕೋಟೆ ನಗರದಲ್ಲಿ ಕೆಲವಡೆ ರಸ್ತೆ, ಚರಂಡಿ, 24*7 ಕುಡಿಯುವ ನೀರಿನ ಯೋಜನೆ ದುರಸ್ತಿ, ಕಸ ವಿಲೇವಾರಿ ಕುರಿತು ಮುತುವರ್ಜಿ ವಹಿಸಬೇಕು. ನಗರಸಭೆ ಸದಸ್ಯರು ಗಮನಕ್ಕೆ ತರುವ ವಿಷಯ, ಸಮಸ್ಯೆ ಪರಿಹರಿಸಬೇಕು. ನಿರ್ಲಕ್ಷ್ಯ ಧೋರಣೆ ಅನುಸರಿಸಬಾರದು ಎಂದು ಸಿಬ್ಬಂದಿಗಳ ಮೇಲೆ ಸಿಡಿಮಿಡಿಗೊಂಡರು.