News Karnataka Kannada
Monday, April 29 2024
ಬಾಗಲಕೋಟೆ

ನಗರಸಭೆಯ ಅವ್ಯವಸ್ಥೆ ಬಹಿರಂಗ

New Project (77)
Photo Credit :
ಬಾಗಲಕೋಟೆ: ನಗರಸಭೆಯಲ್ಲಿ ಜನನ, ಮರಣ ಪ್ರಮಾಣ ನೀಡುವಾಗ ಪಡೆಯುವ ಹಣಕ್ಕೆ ಪಾವತಿ ನೀಡುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿದ್ದು. ಈ ಬಗ್ಗೆ ಸ್ಪಷ್ಪನೆ ನೀಡಬೇಕು ಶಾಸಕ ವೀರಣ್ಣ ಚರಂತಿಮಠ ನಗರಸಭೆ ಸಾಮಾನ್ಯ ಸಭೆಯಲ್ಲಿ ಸೂಚನೆ ನೀಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಆಯುಕ್ತ ವಿ.ಮುನಿಶಾಮಪ್ಪ ಮಾತನಾಡಿ,  ತೆರಿಗೆ ಸಂಗ್ರಹ, ಆನ್‌ಲೈನ್ ವಿಚಾರದಲ್ಲಿ ನಾನು ರಾಜ್ಯದಲ್ಲೇ ನಂಬರ್ ಒನ್. ನನ್ನ ವಿರುದ್ಧ ಆರೋಪಗಳೆಲ್ಲವೂ ನಿರಾಧಾರ, ಪೂರ್ವಾಗ್ರಹ ಪೀಡತವಾಗಿ ಹೇಳುತ್ತಾರೆ. ನಾನು ಬಂದ 2 ವರ್ಷದ ಅವಽಯಲ್ಲಿ 2.50 ಕೋಟಿ ರೂ.ಗಳ ಲೇಔಟ್ ಖಾತಾ ಮೊತ್ತವನ್ನು ಸಂಗ್ರಹಿಸಿದ್ದೇನೆ. ಹಿಂದಿನ ಆರು ವರ್ಷದ ಅವಧಿಗೆ ಬಾಕಿ ಉಳಿದಿದ್ದ ಸ್ವಯಂ ಘೋಷಿತ ಆಸ್ತಿ ತೆರಿಗೆ ವಸೂಲಿ ಮಾಡಿದ್ದೇನೆ. ನಗರಸಭೆಯಲ್ಲಿ ಎಲ್ಲವೂ ಸರಿಯಿದೆ ಎಂದು ಹೇಳುತ್ತಿದ್ದಂತೆ ನಗರಸಭೆಯ ಅವ್ಯವಸ್ಥೆ ಸದಸ್ಯರು ಬಹಿರಂಗಗೊಳಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಬಸವರಾಜ ಅವರಾದಿ ಮಾತನಾಡಿ, ಜನನ, ಮರಣ ಪ್ರಮಾಣಪತ್ರದ ಐದಾರು ಪ್ರತಿಗಳನ್ನು ಕೇಳಿದಾಗ ಹೆಚ್ಚಿನ ಹಣ ಸ್ವೀಕರಿಸಲಾಗುತ್ತದೆ. ಅದಕ್ಕೆ ನಾವು ಸ್ವೀಕೃತಿಯ ಪ್ರತಿಯನ್ನು ನೀಡುವುದಿಲ್ಲ. ಅದನ್ನು ಕೆಲವರು ತಪ್ಪು ಭಾವಿಸುತ್ತಾರೆ. ಸ್ವೀಕೃತಿ ರಶೀದಿ ನೀಡಲು ಅವಕಾಶವಿಲ್ಲದ ಕಾರಣ ಹಾಗೆ ಭಾವಿಸುವುದು ಸಹಜ ಎಂದರು.
ಸದಸ್ಯ ರಾಜೇಂದ್ರ ಬಳೂಲಮಠ ಮಾತನಾಡಿ, ವಿದ್ಯಾಗಿರಿಯ 22ನೇ ಕ್ರಾಸ್‌ನಲ್ಲಿ ಅರುಣ ಝಿಂಗಾಡೆ ಎಂಬುವವರ ಮನೆಯಿದ್ದು, ಕಳೆದ ಏಳೆಂಟು ವರ್ಷಗಳಿಂದ ತೆರಿಗೆ ಪಾವತಿಸಿದ್ದಾರೆ. ಖಾತಾ ಉತಾರೆ ನೀಡುತ್ತಿಲ್ಲ. ಖಾತಾ ಇಲ್ಲ ಎಂದು ಹೇಳುತ್ತಾರೆ ಎಂದು ದೂರಿದರು. ಇದಕ್ಕೆ ಅನೇಕ ಸದಸ್ಯರು ಧ್ವನಿಗೊಡಿಸಿ ನೀವು ಇದ್ದಾಗ ಎಲ್ಲವು ಸರಿ ಇರುತ್ತದೆ. ಸಭೆಯಿಂದ ವಾಪಸ್ಸ ತೆರಳುತ್ತಿದ್ದಂತೆ ಅದೇ ರಾಗ ಅದೇ ಹಾಡು ಎಂದು ಅಽಕಾರಿಗಳು, ಸಿಬ್ಬಂದಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ನಗರಾಭಿವೃದ್ಧಿ ಕೋಶದ ನಿರ್ದೇಶಕ ಕೆ.ಮಾಯಣ್ಣ ಗೌಡ ಆಕ್ಷೇಪ ವ್ಯಕ್ತಪಡಿಸಿ, ಹಣ ಪಡೆದುಕೊಂಡಾಗ ಕಡ್ಡಾಯವಾಗಿ ಪಾವತಿ ನೀಡಬೇಕು. ಬೇಕಾಬಿಟ್ಟಿಯಾಗಿ ಪ್ರಮಾಣ ಪತ್ರ ನೀಡಬಾರದು. ಆನ್‌ಲೈನ್ ಮೂಲಕ ನೀಡಬೇಕು ಎಂದು ಸೂಚನೆ ನೀಡಿದರು.

ಒಟ್ಟಾರೆ ನಗರಸಭೆ ಆಯುಕ್ತ ವಿ.ಮುನಿಶಾಮಪ್ಪ ಹೇಳಿಕೆ ನೀಡಿದ ಕೆಲವೇ ನಿಮೀಷದಲ್ಲಿ ಸದಸ್ಯರಿಂದಲೇ ನಗರಸಭೆ ಅವ್ಯವಸ್ಥೆ ಬಹಿರಂಗಗೊOಡಿದ್ದು ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿತ್ತು.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು