ಅಂಬೇಡ್ಕರ್ ವಸತಿ ಯೋಜನೆಯಲ್ಲಿ ಕೇಂದ್ರ ಸರ್ಕಾರದಿಂದ 2 ಲಕ್ಷ ರೂ. ರಾಜ್ಯ ಸರ್ಕಾರದಿಂದ 1.5 ಲಕ್ಷ ರೂ, ವಾಜಪೇಯಿ ವಸತಿ ಯೋಜನೆಯಲ್ಲಿ ಕೇಂದ್ರ ಸರ್ಕಾರದಿಂದ 1.5 ಲಕ್ಷ ರೂ. ರಾಜ್ಯ ಸರ್ಕಾರದಿಂದ 1.20 ಲಕ್ಷ ರೂ. ಸಹಾಯ ಧನ ನೀಡಲಾಗುತ್ತದೆ. ಸರಿಯಾದ ಸಮಯಕ್ಕೆ ಅನುದಾನ ಸಿಗದ ಪರಿಣಾಮ ಸಾವಿರಾರು -ಫಲಾನುಭವಿಗಳು ಮನೆ ಕಟ್ಟಿಸುವುದನ್ನೆ ನಿಲ್ಲಿಸಿಬಿಟ್ಟಿದ್ದಾರೆ. ಹಲವರು ಮನೆಗಳು ಅರ್ಧಕ್ಕೆ ನಿಂತಿದ್ದು ದಿಕ್ಕು ತೋಚದ ಸ್ಥಿತಿ ನಿರ್ಮಾಣವಾಗಿದೆ. ಮನೆ ನಿರ್ಮಿಸುವ ಕನಸು ಸಾಕಾರಗೊಳ್ಳದ ಕಾರಣ ಕಣ್ಣೀರು ಹಾಕುತ್ತಿದ್ದಾರೆ. -ಫಲಾನುಭವಿಗಳು ಕಚೇರಿಗೆ ಅಲೆದಾಡಿ ಸುಸ್ತು ಹೊಡೆದಿದ್ದು, ವಸತಿ ಯೋಜನೆ ಅನುದಾನ ಒದಗಿಸುವುದು ಖಾತ್ರಿನಾ? ಇಲ್ಲವೇ ಎನ್ನುವುದು ಸರ್ಕಾರ ಸ್ಪಷ್ಟಪಡಿಸಬೇಕು ಎಂದು -ಫಲಾನುಭವಿಗಳು ಆಗ್ರಹಿಸುತ್ತಿದ್ದಾರೆ.
ವಸತಿ ಯೋಜನೆಗಳ -ಫಲಾನುಭವಿಗಳ ಹೈರಾಣ!
Photo Credit :
ಬಾಗಲಕೋಟೆ : ಬದುಕಿಗೆ ಸೂರು ಇರಬೇಕು ಎನ್ನುವ ಕಾರಣಕ್ಕೆ ಅನೇಕರು ಮನೆ ನಿರ್ಮಿಸಲು ಹವಣಿಸುತ್ತಾರೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದವರು ಸರ್ಕಾರದಿಂದ ಆಶ್ರಯ ಬಯಸುತ್ತಾರೆ. ಕಳೆದ ಮೂರು ವರ್ಷಗಳಿಂದ ಸಮರ್ಪಕವಾಗಿ ಅನುದಾನ ಬಿಡುಗಡೆಯಾಗದ ಪರಿಣಾಮ ನಗರ ವಸತಿ ಯೋಜನೆಗಳಿಗೆ ಗ್ರಹಣ ಹಿಡಿದಿದೆ. ಕಳೆದ ಮೂರು ವರ್ಷಗಳಿಂದ ಕಾರ್ಮೋಡ ಆವರಿಸಿದೆ.!!
ಜಿಲ್ಲೆಯ ನಗರಸಭೆ, ಪುರಸಭೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ನಿರ್ಮಿಸಿಕೊಳ್ಳಲು ನಗರಾಭಿವೃದ್ಧಿ ಇಲಾಖೆಯಿಂದ ಸರ್ಕಾರ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ವಾಜಪೇಯಿ ನಗರ ವಸತಿ ಯೋಜನೆ ಜಾರಿಗೊಳಿಸಿತ್ತು. ಸ್ಥಳೀಯ ಸಂಸ್ಥೆಗಳು ಕಳುಹಿಸುವ ಪ್ರಸ್ತಾವನೆಯನ್ನು ನಗರಾಭಿವೃದ್ಧಿ ಕೋಶ ಪರಿಶೀಲನೆಗೆ ಒಳಪಡಿಸಿ ಇಲಾಖೆ ಅನುಮೋದನೆ ನೀಡುತ್ತಿತ್ತು. 2015-2016 ಸಾಲಿನಿಂದ ಕಳುಹಿಸಿದ ಅನೇಕ ಪ್ರಸ್ತಾವನೆಗಳಲ್ಲಿ ಸಾವಿರಾರು -ಫಲಾನುಭವಿಗಳಿಗೆ ಸಹಾಯ ಧನ ಮಂಜೂರು ಆಗಿಲ್ಲ ಎನ್ನುವುದು ದುರಂತ ಸಂಗತಿ.
ಕೋಟೆನಾಡಿನಲ್ಲಿ ಅಂಬೇಡ್ಕರ್ ವಸತಿ ಯೋಜನೆ ಅಡಿಯಲ್ಲಿ 2015 ರಿಂದ 2017-18 ವರೆಗೆ 4162 ಗುರಿ ನೀಡಲಾಗಿತ್ತು. ಈ ಪೈಕಿ 2937 -ಫಲಾನುಭವಿಗಳ ಆಯ್ಕೆಯಾಗಿವೆ. 1903 ಮನೆಗಳು ಪೂರ್ಣಗೊಂಡಿವೆ. 539 ಮನೆಗಳು ಪ್ರಗತಿ ಹಂತದಲ್ಲಿವೆ. 495 ಮೆನಗೆಳಿಗೆ ಬ್ಲಾಕ್ ಮಾಡಲಾಗಿದೆ. 1225 -ಫಲಾನುಭವಿಗಳಿಗೆ ಅನುಮೋದನೆ ಸಿಕ್ಕಿಲ್ಲ. ಇನ್ನು ವಾಜಪೇಯಿ ನಗರ ವಸತಿ ಯೋಜನೆಯಲ್ಲಿ 2015-2016 ರಿಂದ 2018-2019 ವರೆಗೆ 7819 ಮನೆಗಳ ಗುರಿ ನೀಡಲಾಗಿತ್ತು. ಈ ಪೈಕಿ 6372 -ಫಲಾನುಭವಿಗಳ ಆಯ್ಕೆಯಾಗಿದೆ. 3583 ಪೂರ್ಣಗೊಂಡಿವೆ. 308 ತಳಪಾಯ, 270 ಗೋಡೆ, 429 ಮನೆಗಳು ಛಾವಣಿ ಹಂತದಲ್ಲಿದ್ದು, ಪ್ರಗತಿಯಲ್ಲಿವೆ. 1780 ಮನೆಗಳಿಗೆ ಬ್ಲಾಕ್ ಮಾಡಲಾಗಿದೆ. 1447 ಅನುಮೋದನೆಗೆ ಬಾಕಿ ಉಳಿದಿವೆ.
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.