ಬಾಗಲಕೋಟೆ : ಬಾಗಲಕೋಟೆ ನಗರದಲ್ಲಿ ಗಣೇಶ ಚತುರ್ಥಿಯ ಮೊದಲ ದಿನ ಸೆ.10 ಮತ್ತು ಐದನೇ ದಿನವಾದ ಸೆ.14 ರಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ನಗರಸಭೆ ವತಿಯಿಂದ ಸಂಜೆ 5 ರಿಂದ ರಾತ್ರಿ 10 ವರೆಗೆ ಮನೆಯಲ್ಲಿ ಸ್ಥಾಪಿಸಿರುವ ಗಣೇಶ ಮೂರ್ತಿ ವಿಸರ್ಜನೆಗೆ ಸಂಚಾರಿ ತೊಟ್ಟಿಗಳ ವ್ಯವಸ್ಥೆ ಮಾಡಲಾಗಿದೆ.
ಬಸವೇಶ್ವರ ವೃತ್ತ, ವಿದ್ಯಾಗಿರಿ ಇಂಜಿನಿಯರಿOಗ್ ಕಾಲೇಜ ಸರ್ಕಲ್, ನವನಗರ ಎಲ್.ಐ.ಸಿ ವೃತ್ತ ಹಾಗೂ ನವನಗರ ಸೆಕ್ಟರ ನಂ.57, ಎಚ್.ಪಿ ಪೆಟ್ರೋಲ್ ಪಂಪ್ ಎದುರು ಸಂಚಾರಿ ತೊಟ್ಟಿಗಳ ವ್ಯವಸ್ಥೆ ಮಾಡಲಾಗಿದೆ. ಆದ್ದರಿಂದ ಸಾರ್ವಜನಿಕರು ಮನೆಯಲ್ಲಿ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಗಳನ್ನು ನದಿ ಮತ್ತು ಇತರೇ ನೀರಿನ ಮೂಲಗಳಲ್ಲಿ ವಿಸರ್ಜಿಸದೇ ಜಲಮಾಲಿನ್ಯ ತಡೆಯಲು ಸಂಚಾರಿ ತೊಟ್ಟಿಗಳಲ್ಲಿ ವಿಸರ್ಜಿಸುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಆರ್.ಎಸ್.ಪುರಾಣಿಕ ಪ್ರಕಟಣೆಯಲ್ಲಿ ಕೋರಿದ್ದಾರೆ.