ಬೆಂಗಳೂರು, ; ಬಿಬಿಎಂಪಿ ಸ್ವೆಟರ್ ನೀಡಿಕೆ ವಿಚಾರದಲ್ಲಿ ಯಾರೇ ತಪ್ಪು ಮಾಡಿದ್ದರೂ ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಪ್ಪಿತಸ್ಥ ಅಧಿಕಾರಿಗಳನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿದರು. ಹಣ ಬಿಡುಗಡೆಗೆ ಸಚಿವ ಅಶೋಕ್ ಒತ್ತಡ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನನಗೆ ಹೆಚ್ಚು ಮಾಹಿತಿ ಇಲ್ಲ. ಯಾರೇ ತಪ್ಪು ಮಾಡಿದ್ದರೂ ಅಂಥವರ ವಿರುದ್ಧ ಕ್ರಮ ಆಗಲೇಬೇಕು ಎಂದರು.
ಮೈಸೂರಿನಲ್ಲಿ ಗ್ಯಾಂಗ್ ರೇಪ್ ಪ್ರಕರಣ ಘಟನೆ ನಡೆದು 48 ಗಂಟೆ ಕಳೆಯುತ್ತಿದೆ. ಹೀಗಿದ್ದರೂ ತಪ್ಪಿತಸ್ಥರನ್ನು ಬಂಧಿಸುವ ಕೆಲಸ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಂತ್ರಸ್ಥೆ ಜತೆಗಿದ್ದ ಯುವಕ ಯಾರು ಎಂಬುದು ಗೊತ್ತಿದೆ. ಕೃತ್ಯ ನಡೆಸಿದವರು ಯಾರು ಎಂದೂ ಗೊತ್ತಿದೆ. ಹೀಗಿದ್ದರೂ ಬಂಧಿಸದೆ ಇರುವುದು ಬೇಸರದ ಸಂಗತಿ ಎಂದರು. ಗೃಹ ಸಚಿವರಿಗೆ ಅನುಭವ ಕಡಿಮೆ ಇರಬಹುದು. ಆದರೆ ಅಧಿಕಾರಿಗಳಿಗೆ ಅನುಭವ ಇಲ್ವಾ? ಸಣ್ಣಪುಟ್ಟ ತಪ್ಪು ಮಾಡಿದ ರೌಡಿಗಳು ತಪ್ಪಿಸಿಕೊಳ್ಳುವಾಗ ಕಾಲಿಗೆ ಗುಂಡು ಹೊಡೆಯುತ್ತಾರೆ ಅಲ್ವಾ..? ಅದೇ ರೀತಿ ಗ್ಯಾಂಗ್ ರೇಪ್ ಮಾಡಿದವರು ತಪ್ಪಿಸಿಕೊಳ್ಳುತ್ತಾರೆ ಅಂದರೆ ಅವರ ಕಾಲಿಗೂ ಗುಂಡು ಹೊಡೆದು ಬಂಧಿಸಬಹುದಲ್ವ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಸ್ವೆಟರ್ ಅಕ್ರಮ : ತಪ್ಪಿತಸ್ತರ ವಿರುದ್ಧ ಕ್ರಮಕ್ಕೆ ಮಾಜಿ ಸಚಿವ ರಾಮಲಿಂಗಾರೆಡ್ಡಿ ಒತ್ತಾಯ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.