ಬೆಂಗಳೂರು: ನಾನು ರಾಜಕಾರಣ ಮಾಡೋಕೆ ಎಂದೇ ರಾಜಕೀಯ ಪ್ರವೇಶಿಸಿದ್ದೇನೆಯೇ ಹೊರತು ಪ್ರವಾಸ ಮಾಡಲು ಬೆಂಗಳುರಿಗೆ ಬಂದಿಲ್ಲ ಎಂದು ಹಾಸನ ಶಾಸಕ ಪ್ರೀತಂ ಗೌಡ ಹೇಳಿದ್ದಾರೆ. ನಾನು ಪ್ರಶ್ನೆ ಮಾಡಿದ್ದು ನೂರಕ್ಕೆ ನೂರು ಸತ್ಯ. ಒಂದು ಸಾರಿ ಗೆದ್ದರೇ ಐದು ಬಾರಿ ಗೆಲ್ಲೋದು. ಮೊದಲು ಗೆದ್ದವರಿಗೂ ಒಂದೇ ವೋಟು, ಆರು ಬಾರಿ ಗೆದ್ದವರಿಗೂ ಒಂದೇ ವೋಟು. ನನ್ನ ಬಗ್ಗೆ ಮಾತನಾಡುವಾಗ ಹಿರಿಯರೇ ಆಗಲಿ, ಯಾರೇ ಆಗಲಿ ಎಚ್ಚರದಿಂದ ಇರಬೇಕು ಎಂದು ಅವರು ಹೇಳಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ಸ್ವೀಕರಿಸಿದ 24 ಗಂಟೆಯೊಳಗೆ ದೇವೇಗೌಡರ ಮನೆಗೆ ಹೋಗುವ ಅಗತ್ಯವೇನಿತ್ತು? ಎಂಬ ಕಾರ್ಯಕರ್ತರ ಕೇಳುತ್ತಿದ್ದಾರೆ. ಅದನ್ನೇ ನಾನು ಕೇಳಿದ್ದೇನೆ. ಹಿರಿಯರು ಮಾರ್ಗದರ್ಶನ ಮಾಡಲಿ. ಅದು ಬಿಟ್ಟು ಬೇರೆಯವರ ಬಗ್ಗೆ ಮಾತನಾಡುವುದು ಬೇಡ. ನಾನು ಮಂತ್ರಿ ಸ್ಥಾನ ಕೇಳೇ ಇಲ್ಲ. ನೆಲ, ಜಲ, ಭಾಷೆ ಬಗ್ಗೆ ಬೇಕಾದರೆ ಮಾತನಾಡಲಿ. ನನ್ನ ಬಗ್ಗೆ ಹಗುರವಾಗಿ ಮಾತಾಡುವುದನ್ನು ನಾನು ಸಹಿಸಲ್ಲ ಎನ್ನುತ್ತಲೇ ಸಚಿವರಾದ ವಿ.ಸೋಮಣ್, ಗೋವಿಂದ ಕಾರಜೋಳ ಅವರಿಗೆ ಟಾಂಗ್ ಕೊಟ್ಟರು
ಪಕ್ಷದ ಹಿರಿಯರಿಗೆ ಎಚ್ಚರಿಕೆಯಿಂದ ಮಾತಾಡಿ ಎಂದ ಶಾಸಕ ಪ್ರೀತಂ ಗೌಡ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.