ಪುಣೆ, ; ಯಾವ ಬೆಳೆಗೂ ನಿಗದಿತ ಬೆಲೆ ಇಲ್ಲ, ಅದಕ್ಕಾಗಿ ತಮ್ಮ ಜಮೀನಿನಲ್ಲಿ ಗಾಂಜಾ ಬೆಳೆಯಲು ಅನುಮತಿ ನೀಡಿ ಎಂದು ರೈತನೊಬ್ಬ ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಿದೆ. ಸೋಲಾಪುರ ಜಿಲ್ಲೆ ಮೊಹೊಲ್ ತಾಲ್ಲೂಕಿನ ಅನಿಲ್ ಪಾಟೀಲ್ ಎಂಬ ರೈತ ಸೊಲಾಪುರ ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಿದ್ದು, ತಮ್ಮ ಎರಡು ಎಕರೆ ಭೂಮಿಯಲ್ಲಿ ಗಾಂಜಾ ಬೆಲೆಯಲು ಸೆಪ್ಟಂಬರ್ 15ರ ಒಳಗೆ ಅನುಮತಿ ನೀಡಬೇಕು.
ಒಂದು ವೇಳೆ ನಿಗದಿತ ಅವಧಿಯ ಒಳಗೆ ಅನುಮತಿ ನೀಡದೆ ಇದ್ದರೆ ಸೆ.16ರ ಬಳಿಕ ತಾವು ಗಾಂಜಾ ನಾಟಿ ಮಾಡುವುದಾಗಿ ತಿಳಿಸಿದ್ದಾರೆ. ತಮ್ಮ ವಿರುದ್ಧ ಯಾವುದಾರೂ ಕ್ರಿಮಿನಲ್ ಪ್ರಕರಣ ದಾಖಲಾದರೆ ಅದಕ್ಕೆ ಜಿಲ್ಲಾಡಳಿತವೇ ಹೊಣೆ ಎಂದು ಅವರ ಅರ್ಜಿಯಲ್ಲಿ ತಿಳಿಸಿದ್ದಾರೆ. ಈಗಿನ ವ್ಯವಸ್ಥೆಯಲ್ಲಿ ಯಾವ ಕೃಷಿ ಉತ್ಪನ್ನಗಳಿಗೂ ನಿಖರ ಹಾಗೂ ನಿಗದಿತ ಬೆಲೆ ಇಲ್ಲ. ಕೃಷಿ ಮಾಡಿದರೆ ಉಳುಮೆಯ ಖರ್ಚು ಕೂಡ ಗಿಟ್ಟುತ್ತಿಲ್ಲ. ಸಕ್ಕರೆ ಕಾರ್ಖಾನೆಗಳು ಸಕ್ಕರೆ ಮಾರಿಕೊಳ್ಳುತ್ತವೆ, ಲಾಭ ಬರದೆ ಇರುವ ಕಾರಣಕ್ಕೆ ಕಬ್ಬು ಬೆಳೆಗಾರರಿಗೆ ಬಾಕಿ ಪಾವತಿ ಮಾಡುತ್ತಿಲ್ಲ ಎಂದು ರೈತರ ಸ್ಥಿತಿಯನ್ನು ಅನಿಲ್ ಪಾಟೀಲ್ ವಿವರಿದ್ದಾರೆ.
ಆದರೆ ಪೋಲೀಸರು ರೈತ ಗಾಂಜಾ ಬೆಳೆದರೆ ಕ್ರಮ ಕೈಗೊಳ್ಳುವುದಗಿ ತಿಳಿಸಿದ್ದಾರೆ.
ಕೃಷಿ ಉತ್ಪನ್ನಗಳಿಗೆ ಬೆಲೆ ಇಲ್ಲ ; ತನ್ನ ಜಮೀನಲ್ಲಿ ಗಾಂಜಾ ಬೆಳೆಯಲು ಅನುಮತಿ ಕೊಡಿ ಎಂದ ರೈತ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.